Advertisement

Harihara; ಕೊಚ್ಚಿ ಹೋಗಿದ್ದ ಯುವಕನ ಶವ 2 ಕಿ.ಮೀ ದೂರದಲ್ಲಿ ಪತ್ತೆ

10:40 PM Jul 21, 2024 | Team Udayavani |

ದಾವಣಗೆರೆ: ಹರಿಹರ ತಾಲೂಕಿನ ಧೂಳೆಹೊಳೆ ಬಳಿ ತುಂಗಭದ್ರಾ ನದಿಯಲ್ಲಿ ದನಗಳ ಮೈ ತೊಳೆಯುತ್ತಿದ್ದ ಸಂದರ್ಭದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಭಾನುವಾರ ಪತ್ತೆಯಾಗಿದೆ.ಇಂಗಳಗೊಂದಿ ಗ್ರಾಮದ ಜಯಪ್ಪ (32) ಮೃತಪಟ್ಟ ದುರ್ದೈವಿ.

Advertisement

ಧೂಳೆಹೊಳೆ ಗ್ರಾಮದ ಬಳಿ ಶನಿವಾರ ಸಂಜೆ ತುಂಗಭದ್ರಾ ನದಿಯಲ್ಲಿ ತುಂಗಭದ್ರಾ ನದಿಯಲ್ಲಿ ದನಗಳ ಮೈ ತೊಳೆಯಲು ಜಯಪ್ಪ ನೀರಿಗಿಳಿದಿದ್ದ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದನು. ಧೂಳೆಹೊಳೆ ಗ್ರಾಮದ ಬಳಿಯಿಂದ ಸುಮಾರು 2 ಕಿಲೋ ಮೀಟರ್‌ ದೂರದಲ್ಲಿ ಶವ ಪತ್ತೆಯಾಗಿದೆ. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next