Advertisement

ರಾಷ್ಟ್ರದ್ರೋಹಿ ಕೆಲಸಕ್ಕೆ “ಕೈ’ನಾಯಕರ ಇಂಬು

11:30 PM Feb 22, 2020 | Lakshmi GovindaRaj |

ಧಾರವಾಡ: ರಾಜ್ಯದ ಅನ್ನ, ನೀರು, ಉಪ್ಪು ತಿಂದು “ಪಾಕಿಸ್ತಾನ್‌ ಜಿಂದಾಬಾದ್‌’ ಎಂಬ ಘೋಷಣೆ ಕೂಗುವ ಅವಿವೇಕಿಗಳನ್ನು ಡಿ.ಕೆ.ಶಿವಕುಮಾರ್‌ ಬೆಂಬಲಿಸುವುದು ಖಂಡನೀಯ. ಇದು ನಾಚಿಗೇಡಿನ ಸಂಗತಿ. ಇಂದು ಹುಡುಗಿ ಬಾಯಲ್ಲಿ ಬಂದಿರುವ “ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆ, ನಾಳೆ ಡಿಕೆಶಿ ಬಾಯಲ್ಲಿ ಬಂದರೂ ಅಚ್ಚರಿಪಡಬೇಕಿಲ್ಲ ಎಂದು ಸಚಿವ ಜಗದೀಶ ಶೆಟ್ಟರ ಟೀಕಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಹಾಗೂ ಅದರ ನಾಯಕರು ನೀಡುವ ಬೆಂಬಲದಿಂದ ರಾಜ್ಯದಲ್ಲಿ ರಾಷ್ಟ್ರದ್ರೋಹದ ಚಟುವಟಿಕೆಗಳು ಹೆಚ್ಚುತ್ತಿದ್ದು, ಮುಖ್ಯವಾಗಿ ಕಾಂಗ್ರೆಸ್‌ ಪಕ್ಷವೇ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದೆ. ರಾಷ್ಟ್ರದ್ರೋಹದ ಕೆಲಸಕ್ಕೆ ಕಾಂಗ್ರೆಸ್‌ ನಾಯಕರೇ ರಾಜ್ಯದಲ್ಲಿ ಇಂಬು ನೀಡುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.

ಪಾಕ್‌ ಗೆದ್ದಾಗ ಪಟಾಕಿ ಹಾರಿಸಿದವರ ಬಗ್ಗೆ ಕಾಂಗ್ರೆಸ್‌ನವರು ಹುಡುಗರು ಮಾಡಿದ್ದಾರೆ ಬಿಡಿ ಎನ್ನುತ್ತಿದ್ದರು. ಸಿಎಎ ಇಟ್ಟುಕೊಂಡು ಒಂದು ಕೋಮಿನ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಕ್ಸಲ್‌ ಜತೆಗೆ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಡಿಕೆಶಿಯವರು ಅಮೂಲ್ಯ ಹೇಳಿಕೆಯನ್ನು ಬೆಂಬಲಿಸಿರಬೇಕು ಎಂದು ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next