Advertisement

ಕಾಂಗ್ರೆಸ್‌ ಸರ್ಕಾರದಿಂದ ಅನ್ಯಾಯ

01:20 PM Mar 27, 2017 | Team Udayavani |

ಹರಿಹರ: ಹಿಂದುಳಿದ ಹಾಗೂ ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿರುವ ಅನುದಾನ ಬಳಸಿಕೊಳ್ಳದೇ ರಾಜ್ಯ ಕಾಂಗ್ರೆಸ್‌ ಸರ್ಕಾರ ಅನ್ಯಾಯವೆಸಗಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಆರೋಪಿಸಿದರು. ನಗರ ಹೊರವಲಯದ ಬೆಳ್ಳೂಡಿ ಕಾಗಿನೆಲೆ ಕನಕ ಶಾಖಾ ಮಠದ ಆವರಣದಲ್ಲಿ ಭಾನುವಾರ ನಡೆದ ವಾರ್ಷಿಕೋತ್ಸವ, ಕನಕ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ, ದಲಿತ ವರ್ಗಗಳಿಗೆ 98 ಕೋಟಿ ರೂ. ಅನುದಾನ ಬಳಕೆ ಮಾಡಿದ್ದರೆ, ಈಗಿನ ಸರ್ಕಾರ ಇದರಲ್ಲಿ ಶೇ.53ರಷ್ಟು ಅನುದಾನ ಮಾತ್ರ ಬಳಕೆ ಮಾಡಿದೆ ಎಂದರು. ಅನುದಾನ ಬಳಸಿಕೊಳ್ಳದ ಬಗ್ಗೆ ಸಿಎಂ ಹಾಗೂ ಸಮಾಜ ಕಲ್ಯಾಣ ಸಚಿವರು ಬೇಡಿಕೆ ಬಂದಿಲ್ಲ, ಯಾರೂ ಅರ್ಜಿ ಸಲ್ಲಿಸಿಲ್ಲ ಎನ್ನುತ್ತಿದ್ದು, ಹಿಂದುಳಿದ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿರುವ ಕಾಗಿನೆಲೆ ಶ್ರೀಗಳು ಕೂಡಲೇ ಒಕ್ಕೂಟದ ಸಭೆ ನಡೆಸಿ ಸರಕಾರಕ್ಕೆ ಅರ್ಜಿ ಹಾಕಿಸಬೇಕು.

ನಾನು ಕೂಡ ಅನುದಾನ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ. ಸರ್ಕಾರ ಹಿಂದುಳಿದ, ದಲಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದರು. ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕನಕ ಶಾಖಾ ಮಠದಲ್ಲಿ ಐಎಎಸ್‌, ಕೆಎಎಸ್‌ ತರಬೇತಿ ಕೇಂದ್ರ ಆರಂಭಿಸಿರುವುದು ಗ್ರಾಮೀಣ ಭಾಗದ ಯುವಕರಿಗೆ ಅನುಕೂಲವಾಗಿದೆ. 

ತರಬೇತಿಗೆಂದು ಮಹಾನಗರಗಳಿಗೆ ವಲಸೆ ಹೋಗುವುದು ತಪ್ಪಿದಂತಾಗಿದೆ. ಹಿಂದೆ ಮಠದ ಜಾಗದ ಖರೀದಿಗೆ 20 ಲಕ್ಷ ರೂ. ಅನುದಾನ ನೀಡಿದ್ದೆ, ಈಗ ಹೆಚ್ಚುವರಿಯಾಗಿ 5 ಲಕ್ಷ ರೂ. ಅನುದಾನ ನೀಡುವುದಾಗಿ ವಾಗ್ಧಾನ ಮಾಡಿದರು. ಸಾನ್ನಿಧ್ಯ ವಹಿಸಿದ್ದ ನಿರಂಜನಾನಂದಪುರಿ ಶ್ರೀಗಳು ಮಾತನಾಡಿ, ಶಾಖಾ ಮಠವು ವರ್ಷದ ಅವಧಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ತರಬೇತಿ ಕೇಂದ್ರದ ಕಟ್ಟಡ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ 4 ಕೋಟಿ ರೂ. ಅನುದಾನ ನೀಡಿದ್ದಾರೆ.

ವಿವಿಧ ಪಕ್ಷಗಳ ರಾಜಕಾರಣಿಗಳು ನೀಡಿದ 98 ಲಕ್ಷ ರೂ. ಗಳಲ್ಲಿ ಜಮೀನು ಖರೀದಿಸಿ, ಭಕ್ತರು ನೀಡಿದ ಹಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ. 2ನೇ ವರ್ಷಾಚರಣೆ ವೇಳೆ ಸಿಎಂ ಕರೆಸಿ ತರಬೇತಿ ಕೇಂದ್ರ ಉದ್ಘಾಟಿಸುವುದಾಗಿ ತಿಳಿಸಿದರು. ಹೊಸಹಳ್ಳಿ ವೇಮನಾನಂದ ಶ್ರೀ, ನಂದಿಗುಡಿ ಸಿದ್ದರಾಮೇಶ್ವರ ಶ್ರೀ, ಶಾಖಾ ಮಠದ ಈಶ್ವರಾನಂದ ಶ್ರೀ, ಶಿವಾನಂದಪುರಿ ಶ್ರೀ, ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ,

Advertisement

ಎಚ್‌. ವಿಶ್ವನಾಥ್‌, ಜಿ.ಕರುಣಾಕರ ರೆಡ್ಡಿ, ಮಾಜಿ ಶಾಸಕ ಬಸವರಾಜ ನಾಯ್ಕ, ನಗರಸಭಾ ಅಧ್ಯಕ್ಷೆ, ಆಶಾ ಮರಿಯೋಜಿರಾವ್‌, ಕಾಂಗ್ರೆಸ್‌ ಮುಖಂಡ ಎಸ್‌.ರಾಮಪ್ಪ, ಬಿ.ರೇವಣಸಿದ್ದಪ್ಪ, ಜಿಪಂ ಸದಸ್ಯರಾದ ಜಯಶೀಲ, ಪರಮೇಶ್ವರಪ್ಪ, ವೃತ್ತ ನಿರೀಕ್ಷಕ ಕುಣಿಬೆಳೆಕೆರೆ ದೇವೇಂದ್ರಪ್ಪ, ಎಂ.ನಾಗೇಂದ್ರಪ್ಪ, ಕುಂಬಳೂರು ವಿರೂಪಾಕ್ಷಪ್ಪ, ಸಿ.ಎನ್‌. ಹುಲಗೇಶ್‌, ಡಾ| ಮಹೇಶ್ವರಪ್ಪ, ಎಚ್‌.ಕೆ. ಕನ್ನಪ್ಪ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next