Advertisement
ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ತಾಪಂ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು. ಇವುಗಳನ್ನು ತಡೆಯುವಲ್ಲಿ ಜನಸಾಮಾನ್ಯರಿಗೆ ಕಾನೂನಿನ ಅರಿವು ನೀಡಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ಜನಸಾಮಾನ್ಯರಿಗೆ ಕಾನೂನು ನೆರವು ನೀಡುವ ಸಲುವಾಗಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾದ ಕಾನೂನು ಸಾಕ್ಷರತಾ ರಥಾ ಕಾರ್ಯಕ್ರಮದ ಮೂಲಕ ಜನಸಾಮಾನ್ಯರಿಗೆ ಕಾನೂನಿನ ಜ್ಞಾನ ತಲುಪುವಂತಾಗಬೇಕು. ಜನರಿಗೆ ಕಾನೂನು ಮಾಹಿತಿನೀಡಿದರೆ ಸಾಲದು. ನೊಂದವರಿಗೆ ಕಾನೂನು ಸಹಾಯ ದೊರಕುವಂತಾಗಬೇಕು. ಅಂದಾಗ ಕಾನೂನು ನೆರವು ಕಾರ್ಯವು ಸಾರ್ಥಕವಾಗುತ್ತದೆ ಎಂದರು.
Related Articles
Advertisement
ಎಲ್ಲೆಲ್ಲಿ ಕಾರ್ಯಕ್ರಮ?ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಾಲಯ ಕಾರ್ಯಕ್ರಮಗಳು ಮೇ 17ರಂದು ಬೆಳಗ್ಗೆ 10 ಗಂಟೆಗೆ ಅಂಚಟಗೇರಿ ಗ್ರಾಮದ ಕೆನ್ ಅಗ್ರಿಟೇಕ್, ಸಂಜೆ 5:30 ಗಂಟೆಗೆ ಹಳೇ ಹುಬ್ಬಳ್ಳಿಯ ನ್ಯೂ ಇಂಗಿಷ್ ಶಾಲೆಯ ಹತ್ತಿರದ ಮುಧೋಳ ಭವನ, 18ರಂದು ಬೆಳಗ್ಗೆ 10 ಗಂಟೆಗೆ ಅದರಗುಂಚಿ ಗ್ರಾಮದ ಗ್ರಾಪಂ ಸಭಾಭವನ, ಸಂಜೆ 5:30 ಗಂಟೆಗೆ ಘಂಟಿಕೇರಿಯ ಬಾಲಮಂದಿರ ಹಾಗೂ 19ರಂದು ಬೆಳಗ್ಗೆ 10 ಗಂಟೆಗೆ ಹೆಬಸೂರದ ಸಮುದಾಯ ಭವನ, 5:30 ಗಂಟೆಗೆ ಕಿರೇಸೂರು ಗ್ರಾಪಂನಲ್ಲಿ ನಡೆಯಲಿವೆ.