Advertisement

ಸಮ್ಮಿಶ್ರ ಸರ್ಕಾರದ ಗೆಲುವು: ಸುನೀಲಗೌಡ

06:00 AM Sep 12, 2018 | Team Udayavani |

ವಿಜಯಪುರ: “ರಾಜ್ಯದಲ್ಲಿ ಮೈತ್ರಿ ಪಕ್ಷ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ನನ್ನ ಗೆಲುವಿನ ಮೂಲಕ ಮೈತ್ರಿ ಸರ್ಕಾರದ ಜಯವಾಗಿದೆ. ಜನತೆ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸಲು ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುತ್ತೇನೆಂದು’ ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆ ಮೇಲ್ಮನೆ ಉಪ ಚುನಾವಣೆ ವಿಜೇತ ಅಭ್ಯರ್ಥಿ ಕಾಂಗ್ರೆಸ್‌ನ ಸುನೀಲಗೌಡ ಪಾಟೀಲ ಹೇಳಿದರು. 

Advertisement

ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಜನಪರ ಕಾರ್ಯಕ್ರಮಗಳು, ನನ್ನ ಸಹೋದರ ಎಂ.ಬಿ. ಪಾಟೀಲ ಅವರು ಜಲ ಸಂಪನ್ಮೂಲ ಸಚಿವರಾಗಿ ಮಾಡಿದ ನೀರಾವರಿ ಕಾರ್ಯಕ್ರಮಗಳು, ಅವಳಿ ಜಿಲ್ಲೆಯಲ್ಲಿ ನಮ್ಮ ತಂದೆ ಬಿ.ಎಂ. ಪಾಟೀಲ ಮಾಡಿರುವ ಸಾಧನೆ, ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಸಂಘಟಿತ ಪ್ರಯತ್ನ, ಮೈತ್ರಿ ಪಕ್ಷಗಳ ನಾಯಕರು ಬದ್ಧತೆಯಿಂದ ಒಗ್ಗೂಡಿ ಪರಿಶ್ರಮ ಪಟ್ಟ ಕಾರಣವೇ ನನ್ನ ಗೆಲುವಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next