Advertisement

ಅವಿರೋಧ ಆಯ್ಕೆ ಖುಷಿ ತಂದಿದೆ

11:50 AM Jun 05, 2018 | Team Udayavani |

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಸಂತೋಷವಾಗಿದೆ. ಸಂಖ್ಯಾಬಲದ ಆಧಾರದಲ್ಲಿ ಎಲ್ಲರೂ ಸುಲಭವಾಗಿ ಚುನಾಯಿತರಾಗಿದ್ದೇವೆ ಎಂದು ನೂತನವಾಗಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

Advertisement

ಅವಿರೋಧ ಆಯ್ಕೆ ಘೊಷಣೆ ನಂತರ ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ಈ ಚುನಾವಣೆ ಪತಿವ್ರತೆಯರ ಚುನಾವಣೆ ನಡೆದ ಹಾಗೆ ನಡೆದಿದೆ. ಎಲ್ಲ ಚುನಾವಣೆಗಳು ಹೀಗೆ ನಡೆದರೆ ಗೌರವಯುತವಾಗಿ ಗೆಲ್ಲುತ್ತಿದ್ದೆವು. ಎಲ್ಲರ ನಿರೀಕ್ಷೆಗೆ ತಕ್ಕ ಕೆಲಸ ಮಾಡುವ ವಿಶ್ವಾಸ ಇದೆ ಎಂದರು.

 ಪಕ್ಷದಲ್ಲಿ ಸಚಿವಾಕಾಂಕ್ಷಿಗಳಿಗೆ ಅಸಮಾಧಾನ ಇರುವುದು ಸಹಜ. ತಾಯಿಗೆ ನಾಲ್ಕೈದು ಮಕ್ಕಳಿದ್ದಾಗ ಸ್ವಂತ ಅಣ್ಣ ತಮ್ಮಂದಿರಲ್ಲೇ ಆಸೆ ಇರುತ್ತದೆ. ಅಂತಹುದರಲ್ಲಿ ಇಲ್ಲಿ ಇರುವುದಲ್ಲವೇ ಎಂದು ಪ್ರಶ್ನಿಸಿದ ಅವರು, ಅಸಮಾಧಾನ ಗೊಂಡವರನ್ನು ಸಮಾಧಾನ ಮಾಡುವ ಕೆಲಸ ಪಕ್ಷದ ನಾಯಕರು ಮಾಡುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next