Advertisement

ಬಿಜೆಪಿ ಸಮಾವೇಶಕ್ಕೆ ಒಪ್ಪಂದದ ಮೇರೆಗೆ ಬಸ್‌

06:20 AM Feb 04, 2018 | Team Udayavani |

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಆಗಮಿಸುವ ಕಾರ್ಯಕರ್ತರನ್ನು ಕರೆತರಲು ರಾಜ್ಯಾದ್ಯಂತ ಸುಮಾರು 1,300 ಸರ್ಕಾರಿ ಬಸ್‌ಗಳನ್ನು ಕಾಯ್ದಿರಿಸಲಾಗಿದೆ.

Advertisement

ಕೆಎಸ್‌ಆರ್‌ಟಿಸಿಯ 610, ಬಿಎಂಟಿಸಿಯ 570, ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಸುಮಾರು 100
ಹಾಗೂ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 15ಕ್ಕೂ ಅಧಿಕ ಬಸ್‌ಗಳನ್ನು ಬಿಜೆಪಿಯು ಗುತ್ತಿಗೆ ರೂಪದಲ್ಲಿ ಪಡೆದಿದೆ. ಇದಲ್ಲದೆ, ಖಾಸಗಿ ಬಸ್‌, ಟೆಂಪೊ ಟ್ರಾವೆಲ್‌ ಸೇರಿದಂತೆ ಮತ್ತಿತರ ನೂರಾರು ವಾಹನಗಳನ್ನು ಕಾಯ್ದಿರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next