Advertisement
ಪಕ್ಷದ ಸಂಸ್ಥಾಪಕರಾದ ಶ್ಯಾಂ ಪ್ರಕಾಶ್ ಮುಖರ್ಜಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡಂತೆ ಎಲ್ಲಾ ನಾಯಕರು ದೇಶ, ಅಭಿವೃದ್ಧಿ ದೃಷ್ಟಿಕೋನ ಹೊಂದಿದವರು ಎಂದರು.
Related Articles
Advertisement
ಮಹಾನ್ ನಾಯಕರು ಕಷ್ಟಪಟ್ಟು ಬೆಳೆಸಿದ ಪಕ್ಷಕ್ಕೆ ಬೆಳಕಾಗಿ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಕರ್ನಾಟಕ, ಗುಜರಾತ್, ಹಿಮಾಚಲ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜಕಾರಣ ಅಂದ ಮೇಲೆ ಆಸೆ ಇದ್ದೇ ಇರುತ್ತದೆ.
ಆದರೆ, ಅದು ದುರಾಸೆಯಾಗಬಾರದು. ನನ್ನಿಂದಲೇ ಪಕ್ಷ, ನಾನಿದ್ದರೇ ಮಾತ್ರವೇ ಪಕ್ಷ ನಡೆಯುತ್ತೆ ಎಂಬ ಭಾವನೆ ತೋರಬಾರದು. ನಾವೆಲ್ಲರೂ ಒಂದಾಗಿ ಇದ್ದರೆ ಪಕ್ಷ, ನಮಗಿಂತಲೂ ಪಕ್ಷವೇ ಮುಖ್ಯ ಎಂಬ ಮನೋಭಾವನೆಯೊಂದಿಗೆ ಕೆಲಸ ಮಾಡಬೇಕು.
ಎಲ್ಲರೂ ಸಂಘಟಿತರಾಗಿ ಕೆಲಸ ಮಾಡುವ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 150+ ಗುರಿ ಸಾಧಿಸಬೇಕು ಎಂದು ಮನವಿ ಮಾಡಿದರು. ಮಾಜಿ ಅಧ್ಯಕ್ಷ ಎಲ್. ಬಸವರಾಜ್ ಮಾತನಾಡಿ, 1951 ರಲ್ಲಿ ದೀಪದ ಗುರುತಿನೊಂದಿಗೆ ಪ್ರಾರಂಭವಾದ ಜನಸಂಘ 1980ರ ಏ. 6 ರಂದು ಬಿಜೆಪಿಯಾಗಿ ಹೊರ ಹೊಮ್ಮಿತು. 37 ವರ್ಷದ ಹರೆಯದಲ್ಲಿರುವ ಬಿಜೆಪಿ ಈಗ 19 ರಾಜ್ಯ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ.
ಕಾಂಗ್ರೆಸ್ಗೆ ಪರ್ಯಾಯವಾಗಿ ಅತಿ ಬಲಿಷ್ಟವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು. ಮಾಜಿ ಜಿಲ್ಲಾ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಮುಖಂಡರಾದ ಎಚ್. ಎನ್. ಶಿವಕುಮಾರ್, ಎಚ್.ಎಸ್. ಲಿಂಗರಾಜ್. ಸಹನಾ ರವಿ, ಸಿ. ರಮೇಶ್ನಾಯ್ಕ, ಎನ್. ರಾಜಶೇಖರ್, ಸಂಕೋಳ್ ಚಂದ್ರಶೇಖರ್ ಇತರರು ಇದ್ದರು.