Advertisement

ಅರಿವಿನಿಂದ ಸಮಾಜದ ಸ್ವಚ್ಛತೆ ಸಾಧ್ಯ

01:14 PM Sep 22, 2018 | |

ಕೆ.ಆರ್‌.ಪುರ: ದೇವಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಹಾಗೂ ಸರ್ದನ್‌ ಪೌಂಡೇಷನ್‌ ಸಹಭಾಗಿತ್ವದಲ್ಲಿ ಮರು ನವೀಕರಣಗೊಳಿಸಿರುವ ಶೌಚಾಲಯವನ್ನು ಪಾಲಿಕೆ ಸದಸ್ಯ ಎಂ.ಎನ್‌.ಶ್ರೀಕಾಂತ್‌ ಉದ್ಘಾಟಿಸಿದರು.

Advertisement

ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸಲುವಾಗಿ ವಾರ್ಡ್‌ನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಾರ್ಡ್‌ನ ಪ್ರತಿಯೊಬ್ಬರಲ್ಲೂ ಸ್ವಚ್ಛತೆಯ ಅರಿವಿರಬೇಕು. ಆಗ ಮಾತ್ರ ಸಮಾಜ ಸ್ವಚ್ಛವಾಗಿರಲು ಸಾಧ್ಯ ಎಂದರು. ಇನ್ನೂ ದೇವಸಂದ್ರ ಮುಖ್ಯರಸ್ತೆಯಲ್ಲಿ ಕಳೆದ ಐದಾರು ವರ್ಷಗಳ ಹಿಂದೆ ನಿರ್ಮಿಸಿ, ಯಾವುದೇ ಪ್ರಯೋಜವಾಗದೇ ಪಾಳು ಬಿದ್ದ ಸ್ಥಿತಿಯಲ್ಲಿದ್ದ ಶೌಚಾಲಯವನ್ನು ನವೀಕರಣಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಒದಗಿಸಲಾಗಿದೆ.

ಸುಮಾರು ವರ್ಷಗಳಿಂದ ಬಳಸಲು ಸಾದ್ಯವಾಗದ ಸ್ಥಿತಿ ಇದ್ದಿದ್ದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿತ್ತು. ಅಲ್ಲದೇ ಶೌಚಾಲಯಗಳನ್ನು ನಿರ್ಮಿಸಲು ಸ್ಥಳದ ಅಭಾವವಿರುವುದರಿಂದ ಪಾಳುಬಿದ್ದಿದ್ದ ಕಟ್ಟಡವನ್ನು ನವೀಕರಣಗೊಳಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಈ ವೇಳೆ ವಾರ್ಡ್‌ ಅಧ್ಯಕ್ಷ ಅಮೀರ, ಮಾಜಿ ನಗರಸಭಾ ಸದಸ್ಯೆ ರತ್ಮಮ್ಮ, ಮುಖಂಡರಾದ ಅಪ್ಪಿ, ರಿಜ್ವಾನ್‌ ಸೇರಿದಂತೆ ಇತ್ತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next