Advertisement

MRG Group; ಇನ್ನೊಬ್ಬರ ಕಷ್ಟ ಆಲಿಸುವ ಮನಸ್ಥಿತಿ ಶ್ರೇಷ್ಠ: ರಮೇಶ್‌ ಅರವಿಂದ್‌

11:56 PM Dec 25, 2023 | Team Udayavani |

ಮಂಗಳೂರು: ಎಂಆರ್‌ಜಿ ಗ್ರೂಪ್‌ನ ಚೇರ್ಮನ್‌ ಪ್ರಕಾಶ್‌ ಶೆಟ್ಟಿ ಅವರು ಸಹಾಯ ಮಾಡುವಾಗ ಊರು, ಧರ್ಮ, ಹಿನ್ನೆಲೆ ಕೇಳಲಿಲ್ಲ. ಬದಲಾಗಿ “ನಿಮ್ಮ ಕಷ್ಟ ಏನು’ ಎಂದು ಮಾತ್ರ ಕೇಳಿದ್ದಾರೆ. ಇನ್ನೊಬ್ಬರ ಕಷ್ಟ ಕೇಳುವ ಈ ಮನಸ್ಸು ನಿಜಕ್ಕೂ ಶ್ರೇಷ್ಠ ಎಂದು ನಟ ಡಾ| ರಮೇಶ್‌ ಅರವಿಂದ್‌ ಹೇಳಿದರು.

Advertisement

ಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಸೋಮವಾರ ಐದನೇ ವರ್ಷದ ಆಶಾ ಪ್ರಕಾಶ್‌ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ “ನೆರವು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿ
ದರು. ಇನ್ನೊಬ್ಬರನ್ನು ಮೇಲಕ್ಕೆತ್ತಲೆಂದೇ ಭಗವಂತ ನಮಗೆ ಹಸ್ತ ನೀಡಿದ್ದಾನೆ. ಬಲಶಾಲಿಗಳೊಂದಿಗಿನ ಗೆಲುವು ಗೆಲುವಲ್ಲ. ಅಸಹಾಯಕರಿಗೆ ಮಾಡುವಸಹಾಯವೇ ನಮ್ಮ ಗೆಲುವು. ಇರುವುದು ಒಂದು ಜೀವನ. ಅದರಲ್ಲಿ ರುವುದು ಒಂದು ಪುಟ್ಟ “ಹೃದಯ’, ಮತ್ತೊಂದು “ಪ್ರಪಂಚ’. “ಹೃದಯ’ ಪ್ರಪಂಚದ ಎಷ್ಟು ಮಂದಿಗೆ ಸ್ಪಂದಿಸಿದೆ ಎನ್ನುವುದೇ ಮುಖ್ಯ ಎಂದರು.

ಕಳೆದ ಐದು ವರ್ಷಗಳಿಂದ ಸಹಾಯಹಸ್ತ ನೀಡುವ ಪ್ರಕಾಶ್‌ ಶೆಟ್ಟಿಯವರ ಈ ಪಯಣ ಇನ್ನಷ್ಟು ವರ್ಷ ಮುಂದುವರಿಯಲಿ. ನೆರವುಪಡೆದವರು ಸಾಧ್ಯವಾದರೆ ಇನ್ನೊಬ್ಬ ರಿಗೆ ನೆರವಾಗುವ ಮೂಲಕ ಕೃತಾರ್ಥ ರಾಗಬೇಕು ಎಂದರು.

ಕಾರ್ಯಕ್ರಮದ ರೂವಾರಿ ಎಂಆರ್‌ ಜಿ ಗ್ರೂಪ್‌ನ ಚೇರ್ಮನ್‌ ಕೆ. ಪ್ರಕಾಶ್‌ ಶೆಟ್ಟಿ ಮಾತನಾಡಿ, ಜನ್ಮಭೂಮಿಯಿಂದ ಕರ್ಮಭೂಮಿಗೆ ಹೋಗುವಾಗ ಕತ್ತಲ ಹಾದಿಯಲ್ಲಿ ಭಗವಂತ ಬೆಳಕು ತೋರಿಸಿದ. ಊರಿಗೆ ಏನಾದರೂ ಮಾಡಬೇಕು ಎನ್ನುವ ಸಂಕಲ್ಪದಂತೆ ಕಾರ್ಯನಿರತನಾಗಿದ್ದೇನೆ. ಮೊದಲ ವರ್ಷ 1.25 ಕೋ. ರೂ., ಎರಡು ಮತ್ತು ಮೂರನೇ ವರ್ಷ ತಲಾ 2 ಕೋ.ರೂ., ನಾಲ್ಕನೇ ವರ್ಷ 3 ಕೋ.ರೂ. ಸಹಾಯಹಸ್ತ ನೀಡಲಾಗಿದೆ ಎಂದು ಹೇಳಿದರು.

ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ ಮೋಹನ ಆಳ್ವ, ಎಂಆರ್‌ಜಿ ಗ್ರೂಪ್‌ ಆಡಳಿತ ನಿರ್ದೇಶಕ ಗೌರವ್‌ ಪಿ. ಶೆಟ್ಟಿ, ಆಶಾ ಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

ನೆರವು ವಿತರಣೆ
ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಶಿಕ್ಷಣ, ಕ್ರೀಡೆ,ಸಹಿತ ವಿವಿಧ ಕ್ಷೇತ್ರಗಳ ಸಾಧಕರಿಗೆ, ಭಿನ್ನಸಾಮರ್ಥ್ಯದ ಮಕ್ಕಳ ಶಾಲೆಗಳಿಗೆ ಅರ್ಥಿಕ ಬೆಂಬಲ, ಶೌಚಾಲಯ ನಿರ್ಮಾಣಕ್ಕೆ ನೆರವು, ಶಿಕ್ಷಕರ ನೇಮಕಕ್ಕೆ ನೆರವು, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಸಹಿತ ವಿವಿಧ ಸಂಸ್ಥೆಗಳಿಗೆ ನೆರವು ವಿತರಿಸಲಾಯಿತು. ಒಟ್ಟು ಸುಮಾರು 2 ಸಾವಿರ ಕುಟುಂಬ ಗಳಿಗೆ 4 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವಿತರಿಸಲಾಯಿತು.

ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆಸ್ವಾಗತಿಸಿ, ಅನುಷ್ಕಾ ಗೌರವ್‌ ಶೆಟ್ಟಿ ವಂದಿಸಿದರು. ಅಡ್ಯಾರು ಪುರುಷೋತ್ತಮ
ಭಂಡಾರಿ ಸಾಧಕರ ಪಟ್ಟಿ ವಾಚಿಸಿ ದರು. ನಿತೇಶ್‌ ಶೆಟ್ಟಿ ಎಕ್ಕಾರು ನಿರೂಪಿಸಿ ದರು. ಜಗದೀಶ್‌ ಆಚಾರ್ಯ ಪುತ್ತೂರು ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.

ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಟೌನ್‌ಶಿಪ್‌
ಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಯ 100 ಎಕರೆ ಜಾಗದಲ್ಲಿ ಮಂಗಳೂರು ನಗರಕ್ಕೆ ಕಿರೀಟಪ್ರಾಯವಾಗುವ ರೀತಿಯಲ್ಲಿ ಟೌನ್‌ಶಿಪ್‌ ಮಾಡಲು ಉದ್ದೇಶಿಸಲಾಗಿದೆ. ಇದು ಮನೆಗಳು, ಶಾಲೆ, ಆಸ್ಪತ್ರೆ, ಅಪಾರ್ಟ್‌ಮೆಂಟ್‌, ಹೊಟೇಲ್‌, ಮಾಲ್‌ ಎಲ್ಲವನ್ನೂ ಒಳಗೊಳ್ಳಲಿದೆ. 60 ಸಾವಿರ ಮಂದಿಗೆ ಉದ್ಯೋಗ ನೀಡುವ “ಐಟಿ ಪಾರ್ಕ್‌’ ನಿರ್ಮಾಣ ಈ ಯೋಜನೆಯ ಮುಖ್ಯ ಭಾಗವಾಗಿದೆ ಎಂದು ಪ್ರಕಾಶ್‌ ಶೆಟ್ಟಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next