Advertisement

Army ಕಂಟೋನ್ಮೆಂಟ್‌ ಪ್ರದೇಶ ಇನ್ನು ರಾಜ್ಯಗಳ ಪುರಸಭೆ ವ್ಯಾಪ್ತಿಗೆ

12:58 AM Jul 01, 2024 | Team Udayavani |

ಹೊಸದಿಲ್ಲಿ: ರಕ್ಷಣ ಇಲಾಖೆಗೆ ಸೇರಿದ ಪ್ರದೇಶ ಗಳಿಂದ ನಾಗರಿಕ ಪ್ರದೇಶಗಳನ್ನು ಬೇರ್ಪಡಿಸುವ ಪ್ರಕ್ರಿಯೆಗೆ ಕೇಂದ್ರ ಸರಕಾರ ವೇಗ ನೀಡಿದೆ. 13 ಸೇನಾ ದಂಡು ಪ್ರದೇಶಗಳ ವ್ಯಾಪ್ತಿಯಲ್ಲಿರುವ ಆಸ್ತಿಯ ಹಕ್ಕನ್ನು ಸ್ಥಳೀಯ ಪುರಸಭೆಗಳಿಗೆ ವರ್ಗಾಯಿಸಲಾಗು ತ್ತಿದೆ. ಇದರಿಂದಾಗಿ ಸೇನಾ ಕೇಂದ್ರಗಳು ರಕ್ಷಣ ಪಡೆ ಗಳ ವ್ಯಾಪ್ತಿಯಲ್ಲಿ ಉಳಿದರೆ, ಅದರ ಹೊರಗಿನ ಪ್ರದೇ ಶಗಳನ್ನು ಆಯಾ ರಾಜ್ಯ ಸರಕಾರಗಳಿಗೆ ವರ್ಗಾಯಿಸ ಲಾಗುತ್ತದೆ. ಈ ಬಗ್ಗೆ ಕೇಂದ್ರ ಸರಕಾರ ಕಂಟೋನ್ಮೆಂಟ್‌ಗಳಿಗೆ ಪತ್ರ ಬರೆದಿದ್ದು, ನಾಗರಿಕ ಪ್ರದೇಶಗಳನ್ನು ರಾಜ್ಯ ಗಳ ಪಾಲಿಕೆಗಳೊಂದಿಗೆ ವಿಲೀನಗೊಳಿಸುವ ನಿಟ್ಟಿನಲ್ಲಿ ವಿಸ್ತೃತ ಮಾರ್ಗಸೂಚಿಯನ್ನೂ ನೀಡಿದೆ. ಮುನ್ಸಿಪಲ್‌ ಸೇವೆಗಳನ್ನು ಒದಗಿಸಲೆಂದೇ ಇರುವ ಎಲ್ಲ ಸ್ವತ್ತುಗಳ ಮಾಲಕತ್ವದ ಹಕ್ಕುಗಳನ್ನು ರಾಜ್ಯ ಸರಕಾರ ಅಥವಾ ರಾಜ್ಯ ಪುರಸಭೆಗಳಿಗೆ ವರ್ಗಾಯಿಸಬೇಕು ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next