Advertisement

ಬಾಲಪ್ರತಿಭೆ ಸಮನ್ವಿ ಹೆಸರಲ್ಲಿ ಸಂಪಿಗೆ ಗಿಡ ನೆಟ್ಟು ಶ್ರದ್ಧಾಂಜಲಿ ಸಲ್ಲಿಸಿದ ನಟಿ ತಾರಾ

02:53 PM Jan 14, 2022 | Team Udayavani |

ಚಿಕ್ಕಮಗಳೂರು: ಅಪಘಾತದಲ್ಲಿ ಮೃತಪಟ್ಟ ಬಾಲಪ್ರತಿಭೆ ಸಮನ್ವಿಗೆ ನಟಿ ತಾರಾ ಸಂತಾಪ ಸೂಚಿಸಿದ್ದಾರೆ. ಸಮನ್ವಿ ಹೆಸರಲ್ಲಿ ಸಂಪಿಗೆ ಗಿಡ ನೆಟ್ಟು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Advertisement

ಚಿಕ್ಕಮಗಳೂರು ಅರಣ್ಯ ಅಭಿವೃದ್ಧಿ ನಿಗಮದ ಆವರಣದಲ್ಲಿ ಗಿಡ ನೆಟ್ಟ ನಟಿ ತಾರಾ ಸುದ್ದಿಗಾರರೊಂದಿಗೆ ಮಾತನಾಡಿ, “ಬಾಲಕಿಯ ಸಾವು ನ್ಯಾಯವಲ್ಲ, ನನಗೆ ತುಂಬಾ ದುಖವಾಗುತ್ತಿದೆ. ಸಮನ್ವಿ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ನಾನು ಶಾಕ್ ಗೆ ಒಳಗಾದೆ. ಸಮನ್ವಿ ಒಂದು ರೀತಿಯ ವಿಶೇಷ ಮಗು. ನಾನು ಸಂಪಿಗೆ ಗಿಡವನ್ನು ನೆಟ್ಟು ಸಮನ್ವಿಯನ್ನು ಜೀವಂತವಾಗಿರಿಸಿದ್ದೇನೆ. ಆ ಸಂಪಿಗೆ ಗಿಡದಂತೆ ನಳನಳಿಸಲಿ, ಆಕೆ ಜೀವಂತವಾಗಿದ್ದಾಳೆ. ವಿ ರಿಯಲಿ ಲವ್ ಯೂ ಸಮನ್ವಿ” ಎಂದರು.

ಇದನ್ನೂ ಓದಿ:ಕೋವಿಡ್ 19 ಪರಿಣಾಮ: ಜನವರಿ 31ರವರೆಗೆ ಮಧ್ಯಪ್ರದೇಶದಲ್ಲಿ 1ರಿಂದ 12ನೇ ತರಗತಿವರೆಗೆ ಬಂದ್

ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಆರು ವರ್ಷದ ಸಮನ್ವಿ ಗುರುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಳು. ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸ್ಕೂಟರ್ ನಲ್ಲಿ ತಾಯಿ ಅಮೃತಾ ಜೊತೆ ಸಮನ್ವಿ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್​ಗೆ ಹಿಂದಿನಿಂದ ಲಾರಿ ಬಂದು ಹೊಡೆದಿದೆ. ಸ್ಥಳದಲ್ಲೇ ಸಮನ್ವಿ ಮೃತಪಟ್ಟಿದ್ದಾಳೆ. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next