Advertisement

ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 1ಕೋಟಿ ರೂ. ವಂಚನೆ :ಪೊಲೀಸರ ಬಲೆಗೆ ಬಿದ್ದ ಆರೋಪಿ

07:27 PM Nov 21, 2020 | sudhir |

ಥಾಣೆ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 22 ವ್ಯಕ್ತಿಗಳಿಂದ ಸುಮಾರು 1 ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚಿಸಿ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ನವೀ ಮುಂಬೈ ಪೊಲೀಸರು ಬಂಧಿಸಿದ್ದಾರೆ.

Advertisement

ಗುಜರಾತ್‌ನ ವಡೋದರಾ ಮೂಲದ ದಿಲೀಪ್‌ ಕುಮಾರ್‌ ಜಗದೀಶ್‌ ಪ್ರಸಾದ್‌ ಸಿನ್ಹಾ ಬಂಧಿತ ಆರೋಪಿ. 2018ರ ಸೆಪ್ಟೆಂಬರ್‌ನಲ್ಲಿ ಸಿನ್ಹಾ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದರು. “ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಹಲವು ಬಾರಿ ನನ್ನಿಂದ ಸಿನ್ಹಾ ಹಣ ಪಡೆದಿದ್ದ. ಅಲ್ಲದೆ ನಕಲಿ ಅಪಾಯಿಂಟ್‌ಮೆಂಟ್‌ ಲೆಟರ್‌ ನೀಡಿ ದಾರಿ ತಪ್ಪಿಸಿದ್ದ’ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ದೂರಿನನ್ವಯ ಪ್ರಕರಣದ ಒಳಹೊಕ್ಕಿದ್ದ ಪೊಲೀಸರಿಗೆ ಸಿನ್ಹಾ, ಇದೇ ರೀತಿ 22 ವ್ಯಕ್ತಿಗಳಿಗೆ ವಂಚಿಸಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ವಡೋದರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ಹಾಸ್ಯನಟಿಯನ್ನು ಬಂಧಿಸಿದ ಎನ್ ಸಿಬಿ ಅಧಿಕಾರಿಗಳು; ಗಾಂಜಾ ವಶಕ್ಕೆ !

Advertisement

Udayavani is now on Telegram. Click here to join our channel and stay updated with the latest news.

Next