Advertisement

ತಲ್ಲೂರು-ಹೆಮ್ಮಾಡಿ: ವಾಹನ ಸಂಚಾರ ಅಸ್ತವ್ಯಸ್ತ

01:50 PM Jun 13, 2017 | Harsha Rao |

ಕುಂದಾಪುರ: ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಆಗಮಿಸುತ್ತಿದ್ದ ಐಆರ್‌ಬಿ ಕಂಪೆನಿಯ ಟಿಪ್ಪರ್‌ವೊಂದು  ಹೆಮ್ಮಾಡಿಯ ಬಳಿ ಕೆಟ್ಟುಹೋದ ಕಾರಣದಿಂದ ಸಂಜೆ ತಲ್ಲೂರು- ಹೆಮ್ಮಾಡಿಯ ನಡುವೆ ಎರಡು ಗಂಟೆ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡವು.

Advertisement

ರವಿವಾರ ಸುರಿದ ಭಾರಿ ಮಳೆಯಿಂದ ಕುಂದಾಪುರದಿಂದ ಹೆಮ್ಮಾಡಿ ತನಕ ಹೆದ್ದಾರಿ ರಾಡಿಯಾಗಿದ್ದು ಕಾಮಗಾರಿಗೆ ಉಪಯೋಗಿಸಿದ ಕೆಂಪು ಮಣ್ಣು ರಸ್ತೆಯ ಮೇಲೆ ಇಳಿದು  ವಾಹನ ಸಂಚಾರಕ್ಕೆ ಅಪಾಯ ಎದುರಾಗಿದೆ.  

ಹೇರಿಕುದ್ರುವಿನಲ್ಲಿ  ರವಿವಾರ ಮನೆಗಳಿಗೆ ನುಗ್ಗಿದ ನೀರು ಇಳಿಮುಖವಾಗಿದೆ. ಮರವಂತೆಯಲ್ಲಿ ಕುಸಿದ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳು ಈ ಭಾಗದಲ್ಲಿ ಸಂಚರಿಸದಂತೆ ತಡೆಯೊಡ್ಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next