Advertisement

ಪೃಥ್ವಿ ಹೊರಕ್ಕೆ ಮಾಯಾಂಕ್‌, ಪಾಂಡ್ಯ ಒಳಕ್ಕೆ

06:15 AM Dec 18, 2018 | Team Udayavani |

ಪರ್ಥ್: ಪೂರ್ಣ ಆಸ್ಟ್ರೇಲಿಯ ಸರಣಿಯಿಂದಲೇ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಹೊರಕ್ಕೆ ಬಿದ್ದಿದ್ದಾರೆ.ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ಪೃಥ್ವಿ ಶಾ ಕೊನೆಗೂ ಚೇತರಿಕೆ ಕಾಣದ ಕಾರಣಕ್ಕೆ  ಟೀಂ ಇಂಡಿಯಾದಲ್ಲಿ ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್‌ ಮಾಯಾಂಕ್‌ ಅಗರ್ವಾಲ್‌ಗೆ ಸ್ಥಾನ ನೀಡಲಾಗಿದೆ. 

Advertisement

ಪ್ರಸಕ್ತ ಗುಜರಾತ್‌ ವಿರುದ್ಧ ರಣಜಿ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ಮಾಯಾಂಕ್‌ಗೆ ಸೋಮವಾರ ರಾಷ್ಟ್ರೀಯ ತಂಡದಿಂದ ದಿಢೀರ್‌ ಕರೆ ಬಂದಿದೆ. ಈ ಹಿಂದೆ ವೆಸ್ಟ್‌ ಇಂಡೀಸ್‌ ವಿರುದ್ಧದ ತವರಿನಲ್ಲಿ ನಡೆದ ಸರಣಿಗೆ ಮಾಯಾಂಕ್‌ ಆಯ್ಕೆಯಾಗಿದ್ದರು. ಆದರೆ ಅಂತಿಮ ಹನ್ನೊಂದರಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಇವರಿಗೆ ಸ್ಥಾನ ದೊರಕುವ ನಿರೀಕ್ಷೆ ಹೆಚ್ಚಿದೆ. 

ಪೃಥ್ವಿ ಹೊರಬಿದ್ದಿರುವುದು,ಕೆ.ಎಲ್‌.ರಾಹುಲ್‌ – ಮುರಳಿ ವಿಜಯ್‌ ಜೋಡಿ ಆರಂಭಿಕರಾಗಿ ವಿಫ‌ಲರಾಗಿರುವುದು ಗಮನಿಸಿದಾಗ ಮಾಯಾಂಕ್‌ಗೆ ಇನಿಂಗ್ಸ್‌ ಭಾರತದ ಆರಂಭಿಸುವ ಅವಕಾಶ ಸಿಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮೊದಲ ಟೆಸ್ಟ್‌ ಆಡುವ ಮೂಲಕ ಪಾದಾರ್ಪಣೆ ಮಾಡುವ ಹುಮ್ಮಸ್ಸಿನಲ್ಲಿರುವ ಮಾಯಾಂಕ್‌ಗೆ ಅವಕಾಶ ಸಿಗಲಿದೆಯೇ ಎನ್ನುವುದು ಸದ್ಯದ ಕುತೂಹಲ. ಆಸ್ಟ್ರೇಲಿಯ ಪಿಚ್‌ ವೇಗದ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡುತ್ತಿರುವುದರಿಂದ ವೇಗಿ ಹಾರ್ದಿಕ್‌ ಪಾಂಡ್ಯಗೂ ತಂಡವನ್ನು ಕೂಡಿಕೊಳ್ಳುವಂತೆ ಕರೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next