Advertisement

ಅಮಾಯಕರನ್ನು ಕೊಲ್ಲುವವರು ಮುಸ್ಲಿಮರೇ ಅಲ್ಲ : ಇರಾಕ್‌ ವಿದೇಶ ಸಚಿವ

11:18 AM Jul 27, 2017 | udayavani editorial |

ಮುಂಬಯಿ : ”ಇಸ್ಲಾಂ ಹೆಸರಲ್ಲಿ ಅಮಾಯಕರನ್ನು ಕೊಲ್ಲುವ ಭಯೋತ್ಪಾದಕರು ಮುಸ್ಲಿಮರೇ ಅಲ್ಲ” ಎಂದು ಪ್ರಕೃತ ಐದು ದಿನಗಳ ಭಾರತ ಭೇಟಿಯಲ್ಲಿರುವ ಇರಾಕ್‌ ಗಣರಾಜ್ಯದ ವಿದೇಶ ಸಚಿವ ಇಬ್ರಾಹಿಂ ಅಲ್‌ ಜಾಫ‌ರಿ ಹೇಳಿದ್ದಾರೆ. 

Advertisement

“ಭಯೋತ್ಪಾದಕರ ಕೆಲವು ಸಮೂಹಗಳಿವೆ. ಆ ಸಮೂಹಗಳಿಗೆ ಸೇರಿದ ಉಗ್ರರು ಇಸ್ಲಾಂ ಹೆಸರಿನಲ್ಲಿ ಘೋಷಣೆಗಳನ್ನು ಕೂಗುತ್ತಾರೆ. ಅವರು ಅಮಾಯಕ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುತ್ತಾರೆ. ಅವರು ಇಸ್ಲಾಂ ನ ನಿಜವಾದ ಅರ್ಥದಲ್ಲಿ ಮುಸ್ಲಿಮರೇ ಅಲ್ಲ’ ಎಂದು ಅಲ್‌ ಜಾಫ‌ರಿ ಹೇಳಿದರು. 

ಜಾಫ‌ರಿ ಅವರು ದಾವೂದಿ ಬೋಹರಾ ಸಮುದಾಯದ ಮುಸ್ಲಿಮರ ಆಹ್ವಾನದ ಮೇರೆಗೆ ಮುಂಬಯಿಗೆ ಭೇಟಿಕೊಟ್ಟಿದ್ದಾರೆ. 

”ಮುಸ್ಲಿಮರಲ್ಲಿ ಹಲವು ಪಂಥಗಳಿವೆ; ಹಲವು ಸಮುದಾಯಗಳಿವೆ. ಎಲ್ಲ ಬಗೆಯ ಧಾರ್ಮಿಕ ಭಿನ್ನಮತಗಳನ್ನು ಮರೆತು ಮುಸ್ಲಿಮರೆಲ್ಲರೂ ಹೃದಯವಂತಿಕೆಯಿಂದ ಒಗ್ಗೂಡಿದರೆ ವಿಶ್ವ ಶಾಂತಿಯನ್ನು ಸಾಧಿಸಬಹುದಾಗಿದೆ” ಎಂದು ಜಾಫ‌ರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next