Advertisement

Terrorism: ದೇಶದಲ್ಲಿ ಉಗ್ರ ಕೃತ್ಯಗಳು ಶೇ.65 ತಗ್ಗಿವೆ: ಅಮಿತ್‌ ಶಾ ಪ್ರತಿಪಾದನೆ

07:43 PM Oct 21, 2023 | Team Udayavani |

ನವದೆಹಲಿ/ಝೇವಾನ್‌: ದೇಶದಲ್ಲಿನ ಭಯೋತ್ಪದಾಕ ಘಟನೆಗಳು ಶೇ.65 ತಗ್ಗಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಹೇಳಿದ್ದಾರೆ. ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಪೊಲೀಸ್‌ ಹುತಾತ್ಮರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳಲ್ಲಿಯೂ ಕೂಡ ಎಡಪಂಥೀಯ ಉಗ್ರಕೃತ್ಯಗಳು ತಗ್ಗಿವೆ ಎಂದರು.

Advertisement

ಪೊಲೀಸ್‌ ವ್ಯವಸ್ಥೆ ಆಧುನೀಕರಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ ಜಗತ್ತಿಲ್ಲಿಯೇ ಅತ್ಯುತ್ತಮ ಎನಿಸುವ ಪೊಲೀಸ್‌ ತಂತ್ರಜ್ಞಾನ ಮಿಷನ್‌ ಅನ್ನು ಸರ್ಕಾರ ಜಾರಿಗೊಳಿಸಿದೆ ಎಂದರು. ದೇಶದಲ್ಲಿನ ಕಾನೂನು ಕ್ಷೇತ್ರದಲ್ಲಿನ ಮೂರು ಪ್ರಮುಖ ಕಾಯ್ದೆಗಳನ್ನು ಬದಲಾವಣೆ ಮಾಡಲೂ ಮೋದಿ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

ಭಯೋತ್ಪಾದನೆಯನ್ನು ಮಟ್ಟ ಹಾಕಿಯೇ ಸಿದ್ಧ: ದಿಲ್ಬಾಗ್‌ ಸಿಂಗ್‌
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಿಯೇ ಸಿದ್ಧ ಎಂದು ಅಲ್ಲಿನ ಡಿಜಿಪಿ ದಿಲ್ಬಾಗ್‌ ಸಿಂಗ್‌ ಹೇಳಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ 1,605 ಪೊಲೀಸ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರಿಗೆ ನನ್ನ ನಮನಗಳು. ಪ್ರಸಕ್ತ ವರ್ಷವೇ ಎಂಟು ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ಹೀಗಾಗಿ, ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಯ ಹುಟ್ಟಡಗಿಸಿಯೇ ಸಿದ್ದ ಎಂದು ಪಣತೊಡಲಾಗಿದೆ. ಉಗ್ರ ಸಂಘಟನೆಗೆ ಸ್ಥಳೀಯರ ನೇಮಕ ತಗ್ಗಿದೆ. ಕಳೆದ ವರ್ಷ 110 ಮಂದಿ ಸೇರ್ಪಡೆಯಾಗಿದ್ದರೆ, ಹಾಲಿ ವರ್ಷ ಕೇವಲ 10 ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next