Advertisement

ರೈಲ್ವೆ ಕಾಲು ಸೇತುವೆ ಸುಧಾರಣೆಗೆ 2 ಕೋಟಿ ನೀಡಿದ ತೆಂಡುಲ್ಕರ್‌

04:39 PM Oct 23, 2017 | Team Udayavani |

ಮುಂಬಯಿ : ಭಾರತೀಯ ಹಾಗೂ ವಿಶ್ವ ಕ್ರಿಕೆಟ್‌ ರಂಗದ ದಿಗ್ಗಜ ಮತ್ತು ರಾಜ್ಯಸಭಾ ಸದಸ್ಯರಾಗಿರುವ ಸಚಿನ್‌ ತೆಂಡುಲ್ಕರ್‌ ತನ್ನ ಸಂಸದರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಮುಂಬಯಿ ರೈಲು ನಿಲ್ದಾಣಗಳಲ್ಲಿನ ಪ್ರಯಾಣಿಕರ ಕಾಲ್ನಡಿಗೆ ಸೇತುವೆಗಳ ಸುಧಾರಣೆಗೆ 2 ಕೋಟಿ ರೂ. ಮಂಜೂರು ಮಾಡಿದ್ದಾರೆ. 

Advertisement

ಕಳೆದ ಸೆ.29ರಂದು ಮುಂಬಯಿಯ ಅಗಲ ಕಿರಿದಾದ ಎಲ್‌ಫಿನ್‌ಸ್ಟನ್‌ ರೋಡ್‌ ರೈಲು ನಿಲ್ದಾಣದಲ್ಲಿನ ಪ್ರಯಾಣಿಕರ  ಕಾಲ್‌-ಸೇತುವೆಯಲ್ಲಿ ಸಂಭವಿಸಿದ ಕಾಲ್‌ ತುಳಿತಕ್ಕೆ 23 ಮಂದಿ ಬಲಿಯಾಗಿರುವ ಹಿನ್ನೆಲೆಯಲ್ಲಿ ತೆಂಡುಲ್ಕರ್‌, ಈ ರೀತಿಯ ಅಗಲ ಕಿರಿದಾದ ಮತ್ತು ಜೀರ್ಣಾವಸ್ಥೆಗೆ ತಲುಪಿರುವ ಇತರ ಹಲವು ರೈಲ್ವೇ ಕಾಲ್‌ ಸೇತುವೆಗಳ ಸುಧಾರಣೆ, ನವೀಕರಣಕ್ಕೆ 2 ಕೋಟಿ ರೂ. ಒದಗಿಸಿರುವುದು ಗಮನಾರ್ಹವಾಗಿದೆ. 

ತೆಂಡುಲ್ಕರ್‌ ಅವರು ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಪತ್ರಬರೆದು ಮುಂಬಯಿ ಹೊರವಲಯ ಜಿಲ್ಲಾಧಿಕಾರಿಗೆ ಈ ಸಂಬಂಧ 2 ಕೋಟಿ ರೂ. ವಿನಿಯೋಗಕ್ಕೆ ಅನುಮೋದನೆ ನೀಡುವಂತೆ ತಾನು ಕೇಳಿಕೊಂಡಿರುವುದಾಗಿ ಹೇಳಿದ್ದಾರೆ. 

ವೆಸ್ಟರ್ನ್ ಮತ್ತು ಸೆಂಟ್ರಲ್‌ ರೈಲ್ವೆಗೆ  ತನ್ನ ಎಂಪಿಲ್ಯಾಡ್‌ ನಿಧಿಯಿಂದ ತಲಾ 1 ಕೋಟಿ ರೂ. ನೀಡಬಹುದಾಗಿದೆ ಎಂದು ತೆಂಡುಲ್ಕರ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next