Advertisement

Telangana ಚುನಾವಣ ರ‍್ಯಾಲಿ ವಾಹನದಿಂದ ಮಗುಚಿ ಬಿದ್ದ ಸಚಿವ ಕೆಟಿಆರ್;ವಿಡಿಯೋ

05:20 PM Nov 09, 2023 | Team Udayavani |

ನಿಜಾಮಾಬಾದ್ : ಬಿಆರ್‌ಎಸ್‌ ಶಾಸಕ ಹಾಗೂ ಅಭ್ಯರ್ಥಿ ಜೀವನ್‌ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಸಚಿವ ಕೆಟಿಆರ್‌ ಅವರು ಪ್ರಚಾರ ವಾಹನದಿಂದ ಮಗುಚಿ ಬಿದ್ದ ಘಟನೆ ನಡೆದಿದೆ. ವಿಧಾನಸಭಾ ಚುನಾವಣೆಯ ಕಾವು ತೀವ್ರವಾಗಿರುವ ತೆಲಂಗಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

Advertisement

ರ‍್ಯಾಲಿಯ ಸಂದರ್ಭದಲ್ಲಿ ಎಲ್ಲಾ ಬಿಆರ್‌ಎಸ್ ನಾಯಕರು ವಾಹನದ ಮೇಲ್ಛಾವಣಿಯಲ್ಲಿ ನಿಂತಿದ್ದರು ಮತ್ತು ಅದು ಇದ್ದಕ್ಕಿದ್ದಂತೆ ನಿಲ್ಲಿಸಿದಾಗ ಅದು ಅವರೆಲ್ಲರು ಏಕಾಏಕಿ ಬೀಳಲು ಕಾರಣವಾಯಿತು. ವಾಹನದಲ್ಲಿ ಬಿಆರ್ ಎಸ್ ಮುಖಂಡ ಸುರೇಶ್ ರೆಡ್ಡಿ ಕೂಡ ಇದ್ದರು.ಎಎನ್‌ಐ ವಿಡಿಯೋ ಪ್ರಕಾರ, ನಿಜಾಮಾಬಾದ್ ಜಿಲ್ಲೆಯ ಆರ್ಮೂರ್‌ನಲ್ಲಿ ಚುನಾವಣ ರ‍್ಯಾಲಿ ನಡೆಯುತ್ತಿತ್ತು.

ಬ್ಯಾರಿಕೇಡ್ ಹಾಕಲಾಗಿದ್ದ ವ್ಯಾನ್‌ನ ಮೇಲ್ಛಾವಣಿಯಿಂದ ಕೆಟಿಆರ್ ಜನರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ, ಅವರ ಬೆಂಬಲಿಗರು ವಾಹನದ ಪಕ್ಕದಲ್ಲಿ ತರಾತುರಿಯಲ್ಲಿ ಚಲಿಸುತ್ತಿದ್ದರು. ಏಕಾಏಕಿ ನಾಲ್ಕಾರು ವಾಹನಗಳು ನಿಂತಿದ್ದು, ಬ್ಯಾರಿಕೇಡ್ ಕೈಕೊಟ್ಟಿದ್ದರಿಂದ ಮುಖಂಡರು ಮುಗ್ಗರಿಸಿದರು. ಕೆಟಿಆರ್ ತನ್ನ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು ಮತ್ತು ಬೆಂಬಲಕ್ಕಾಗಿ ತಮ್ಮ ಕೈಗಳನ್ನು ಬಳಸಿ ದೊಡ್ಡ ಮಟ್ಟದ ಹಾನಿಯಾಗದಂತೆ ಸಮತೋಲನ ಕಾಯ್ದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next