Advertisement

ಚುನಾವಣೆ ಅಧಿಕಾರಿಗಳಿಂದ ಟೀಶರ್ಟ್‌ ವಶ

12:49 PM Apr 17, 2018 | Team Udayavani |

ಕೆ.ಆರ್‌.ನಗರ: ಅಂಬೇಡ್ಕರ್‌ ಜಯಂತಿ ಆಚರಣೆ ಸಂಬಂಧ ಪಟ್ಟಣದ ಅಚ್ಚುತಾ ಸ್ನೇಹ ಬಳಗದಿಂದ ಅನುಮತಿ ಇಲ್ಲದೇ ಹಂಚಿಕೆ ಮಾಡುತ್ತಿದ್ದ ಟೀಶರ್ಟ್‌ಗಳನ್ನು ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

ಪ್ರತಿ ವರ್ಷದಂತೆ ಬಳಗದಿಂದ ಕಚೇರಿಯಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸುತ್ತಿದ್ದಾಗ ಭಾಗವಹಿಸುವವರಿಗೆ ಅಂಬೇಡ್ಕರ್‌ ಭಾವಚಿತ್ರ ಮತ್ತು ಬಳಗದ ಹೆಸರಿರುವ ಟೀ ಶರ್ಟ್‌ ನೀಡಲಾಗುತ್ತಿತ್ತು. ಈ ವೇಳೆ ಪ್ಲೆ„ಯಿಂಗ್‌ ಸ್ಕ್ವಾಡ್‌ ರವಿಲಿಂಗಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು, 77 ಟೀ ಶರ್ಟ್‌ ವಶ ಪಡಿಸಿಕೊಂಡಿದ್ದಾರೆ. ಅಧಿಕಾರಿಗಳನ್ನು ಕಂಡ ಬಳಗದ ಪದಾಧಿಕಾರಿಗಳು ಪರಾರಿಯಾಗಿದ್ದಾರೆ. 

ಪ್ಲೆ„ಯಿಂಗ್‌ ಸ್ಕ್ವಾಡ್‌ ರವಿಲಿಂಗಪ್ಪ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಅನುಮತಿ ಇಲ್ಲದೆ ಟೀಶರ್ಟ್‌ ವಿತರಣೆ ಮಾಡುವಂತಿಲ್ಲ. ಈ ಬಗ್ಗೆ ತಮಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ, 77 ಟೀಶರ್ಟ್‌ ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ ಎಂದರು.

ಈ ವೇಳೆ ಸ್ನೇಹ ಬಳಗದ ಅಧ್ಯಕ್ಷ ಎಂ.ತಮ್ಮಣ್ಣ ಮಾತನಾಡಿ, ಬಳಗದಿಂದ ಹೊಸದಾಗಿ ಕಾರ್ಯಕ್ರಮ ಮಾಡುತ್ತಿಲ್ಲ. ಹಲವು ವರ್ಷಗಳಿಂದ ಕಚೇರಿಯಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸುತ್ತಿದ್ದು, ಯಾವುದೇ ರಾಜಕೀಯ ಸಭೆ ನಡೆಯುತ್ತಿರಲಿಲ್ಲ. ಆದರೂ ಸಂವಿಧಾನ ಶಿಲ್ಪಿ “ಅಂಬೇಡ್ಕರ್‌ ಜಯಂತಿ ಆಚರಣೆ ವಿಚಾರದಲ್ಲಿ ರಾಜಕೀಯ ಬೆರಿಸಿದ್ದು ವಿಷಾದದ ಸಂಗತಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next