Advertisement

Team India ಮೂರನೇ ಸುತ್ತಿನ ಅಭ್ಯಾಸ

01:50 AM Sep 17, 2024 | Team Udayavani |

ಚೆನ್ನೈ: ಒಂದು ದಿನದ ವಿಶ್ರಾಂತಿಯ ಬಳಿಕ ಟೀಮ್‌ ಇಂಡಿಯಾ ಕ್ರಿಕೆಟಿಗರು ಸೋಮವಾರ 3ನೇ ಸುತ್ತಿನ ಅಭ್ಯಾಸ ನಡೆಸಿದರು. ಬಾಂಗ್ಲಾದೇಶದೆದುರಿನ ಮೊದಲ ಪಂದ್ಯಕ್ಕಾಗಿ ಚೆನ್ನೈ ಬಿಸಿಯಲ್ಲಿ ಸಾಕಷ್ಟು ಬೆವರು ಸುರಿಸಿದರು.
ಈ ಬಾರಿ ತಂಡದ ಎಲ್ಲ ಆಟಗಾರರೂ ಅಭ್ಯಾಸದಲ್ಲಿ ಪಾಲ್ಗೊಂಡರು. ದುಲೀಪ್‌ ಟ್ರೋಫಿ ಪಂದ್ಯಾವಳಿಯಲ್ಲಿ ಆಡುತ್ತಿದ್ದ ಸರ್ಫ‌ರಾಜ್‌ ಖಾನ್‌ ಕೂಡ ಇದ್ದರು.

Advertisement

ಬಾಂಗ್ಲಾದೇಶದ ಸ್ಲೋ ಬೌಲಿಂಗ್‌ ಆಕ್ರಮಣ ವನ್ನು ಗಮನದಲ್ಲಿರಿಸಿಕೊಂಡು, ನಾಯಕ ರೋಹಿತ್‌ ಶರ್ಮ ಸ್ಪಿನ್‌ ಎಸೆತಗಳನ್ನು ಹೆಚ್ಚೆಚ್ಚು ನಿಭಾಯಿಸಿದರು. ಅಭ್ಯಾಸಕ್ಕಾಗಿ ರಚಿಸಲಾದ ಈ ಪಿಚ್‌ ಸಾಕಷ್ಟು ಬೌನ್ಸಿಯಾಗಿತ್ತು.
ವಿರಾಟ್‌ ಕೊಹ್ಲಿ, ಯಶಸ್ವಿ ಜೈಸ್ವಾಲ್‌ ಬಹಳಷ್ಟು ಹೊತ್ತು ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಇಬ್ಬರೂ ಜಸ್‌ಪ್ರೀತ್‌ ಬುಮ್ರಾ ಮತ್ತು ಆರ್‌. ಅಶ್ವಿ‌ನ್‌ ಎಸೆತಗಳನ್ನು ಎದುರಿಸಿದರು.

ರವೀಂದ್ರ ಜಡೇಜ, ರಿಷಭ್‌ ಪಂತ್‌ ಕೂಡ ಬ್ಯಾಟಿಂಗ್‌ ಅಭ್ಯಾಸಕ್ಕೆ ಒತ್ತು ಕೊಟ್ಟರು. ಸ್ಥಳೀಯ ಬೌಲರ್ ಹಾಗೂ ಸ್ಲೋಡೌನ್‌ ಸ್ಪೆಷಲಿಸ್ಟ್‌ಗಳು ಇವರಿಗೆ ಬೌಲಿಂಗ್‌ ನಡೆಸಿದರು.

ಗುರುವಾರ ಚೆನ್ನೈ ಟೆಸ್ಟ್‌ ಆರಂಭಗೊಳ್ಳಲಿದೆ. ಅಷ್ಟರಲ್ಲಿ ಭಾರತದ ಆಟಗಾರರು ಇನ್ನೂ 2 ಸುತ್ತುಗಳ ಅಭ್ಯಾಸ ನಡೆಸುವರು. ಇದೇ ವೇಳೆ ಬಾಂಗ್ಲಾದೇಶದ ಕ್ರಿಕೆಟಿಗರು ಮೊದಲ ಸುತ್ತಿನ ಅಭ್ಯಾಸ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next