Advertisement

Team India; ಹಾರ್ದಿಕ್ ಪಾಂಡ್ಯ ಬಗ್ಗೆ ಅಸಮಾಧಾನಗೊಂಡ ಬೌಲಿಂಗ್‌ ಕೋಚ್‌ ಮಾರ್ಕೆಲ್‌

02:41 PM Oct 04, 2024 | Team Udayavani |

ಗ್ವಾಲಿಯರ್:‌ ಟೆಸ್ಟ್‌ ಸರಣಿ ಮುಗಿದ ಬಳಿಕ ಇದೀಗ ಭಾರತ ಮತ್ತು ಬಾಂಗ್ಲಾದೇಶ ತಂಡವು ಟಿ20 ಸರಣಿಗೆ ಸಜ್ಜಾಗಿದೆ. ಮೊದಲ ಪಂದ್ಯವು ರವಿವಾರ (ಅ.06) ಗ್ವಾಲಿಯರ್‌ (Gwalior) ನಲ್ಲಿ ನಡೆಯಲಿದೆ. ಎರಡೂ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ.

Advertisement

ಟೆಸ್ಟ್‌ ಸರಣಿಯ ಭಾಗವಾಗಿರದ ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ಅವರು ಟಿ20 ತಂಡಕ್ಕೆ ಮರಳಿದ್ದಾರೆ. ಗುರುವಾರ ಅವರು ತಂಡದೊಂದಿಗೆ ಬೌಲಿಂಗ್‌ ಅಭ್ಯಾಸ ನಡೆಸಿದ್ದರು. ಇತ್ತೀಚೆಗೆ ತಂಡ ಸೇರಿದ ಬೌಲಿಂಗ್‌ ಕೋಚ್‌ ಮೋರ್ನೆ ಮಾರ್ಕೆಲ್‌ ಅವರು ಬೌಲರ್‌ ಗಳ ಅಭ್ಯಾಸ ಉಸ್ತುವಾರಿ ನೋಡಿಕೊಂಡರು. ಈ ವೇಳೆ ಹಾರ್ದಿಕ್‌ ಅವರ ಬೌಲಿಂಗ್‌ ಬಗ್ಗೆ ಮಾರ್ಕೆಲ್‌ ಸಂತುಷ್ಟರಾಗಿಲ್ಲ ಎಂದು ವರದಿ ಹೇಳಿದೆ.

ಹಾರ್ದಿಕ್ ಅವರ ವಿಧಾನದ ಬಗ್ಗೆ ಮಾರ್ಕೆಲ್ ಅತೃಪ್ತಿ ಹೊಂದಿದ್ದಾರೆಂದು ಹೇಳಲಾಗಿದೆ. ಬೌಲಿಂಗ್‌ ನಲ್ಲಿ ಮಾಡಬೇಕಾದ ತಿದ್ದುಪಡಿಗಳ ಬಗ್ಗೆ ಇಬ್ಬರೂ ಸುದೀರ್ಘ ಚರ್ಚೆ ನಡೆಸಿದ್ದಾರೆ. ವರದಿಯ ಪ್ರಕಾರ, ಹಾರ್ದಿಕ್ ಸ್ಟಂಪ್‌ ಗೆ ತುಂಬಾ ಹತ್ತಿರದಲ್ಲಿ ಬೌಲಿಂಗ್ ಮಾಡುತ್ತಿದ್ದರು, ಆದರೆ ಮೊರ್ಕೆಲ್ ಅದರ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

ಗ್ವಾಲಿಯರ್‌ನಲ್ಲಿ ನಡೆದ ನೆಟ್ಸ್ ಸೆಷನ್‌ ನಲ್ಲಿ, ಮಾರ್ಕೆಲ್ ಅವರು ಪಾಂಡ್ಯ ರನ್-ಅಪ್‌ ನಲ್ಲಿ ಕೆಲಸ ಮಾಡುತ್ತಿದ್ದರು, ವಿಶೇಷವಾಗಿ ಪಾಂಡ್ಯ ಅವರ ಬೌಲಿಂಗ್ ಕ್ರಿಯೆಯ ಶ್ಯಾಡೋ ಪ್ರ್ಯಾಕ್ಟೀಸ್ ಮಾಡುತ್ತಿದ್ದಾಗ‌ ತಿದ್ದುಪಡಿ ಬಗ್ಗೆ ಹೇಳಿದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದ್ದಾರೆ.

Advertisement

ಹಾರ್ದಿಕ್‌ ಜೊತೆಗಿನ ಮಾತುಕತೆಯ ಬಳಿಕ ಕೋಚ್‌ ಮಾರ್ಕೆಲ್‌ ಅವರು ಎಡಗೈ ವೇಗಿ ಅರ್ಶದೀಪ್‌ ಸಿಂಗ್‌, ಹೊಸ ಬೌಲರ್‌ ಗಳಾದ ಹರ್ಷಿತ್‌ ರಾಣಾ, ಮಯಾಂಕ್‌ ಯಾದವ್‌ ಅವರೊಂದಿಗೆ ಕೆಲಸ ಮಾಡಿದರು.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿ.ಕೀ), ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.

Advertisement

Udayavani is now on Telegram. Click here to join our channel and stay updated with the latest news.

Next