Advertisement

Tamil Nadu:ಎಐಎಡಿಎಂಕೆ,ಬಿಜೆಪಿ ಕಾರ್ಯಕರ್ತರ ಹತ್ಯೆ

01:17 AM Jul 29, 2024 | Team Udayavani |

ಶಿವಗಂಗಾ/ಪಾಂಡಿಚೇರಿ: ತಮಿಳು ನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಬಿಜೆ ಪಿಯ ಕಾರ್ಯರ್ತನೊಬ್ಬನನ್ನು ನಾಲ್ವರ ಗುಂಪು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಶನಿವಾರ ರಾತ್ರಿ ಈ ಬೆಳವಣಿಗೆ ನಡೆದಿದೆ ಎಂದು ಪೊಲೀಸರು ತಿಳಿಸಿ ದ್ದಾರೆ. ಮಾರ್ಕೆಟ್‌ನಿಂದ ಮನೆಗೆ ತೆರಳು ತ್ತಿದ್ದಾಗ ಗುಂಪು ಅವರ ಮೇಲೆ ದಾಳಿ ನಡೆಸಿ ಈ ಕೃತ್ಯವೆಸಗಿದೆ ಎಂದು ಅವರು ತಿಳಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂಬ ಬಗ್ಗೆ ತನಿಖೆಯ ಬಳಿಕ ಗೊತ್ತಾಗಲಿದೆ. ರಾಜಕೀಯ ಕಾರಣಕ್ಕಾಗಿ ನಡೆದಿರುವ ಕೃತ್ಯ ಇದಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

ಎಐಎಡಿಎಂಕೆ ಕಾರ್ಯಕರ್ತನ ಹತ್ಯೆ: ಇನ್ನೊಂದೆಡೆ ಎಐಎಡಿಎಂಕೆ ಕಾರ್ಯ ಕರ್ತನೊಬ್ಬನನ್ನು ಕಡಲೂರಿನಲ್ಲಿ ಅಪರಿ ಚಿತರು ಹತ್ಯೆ ಮಾಡಿದ್ದಾರೆ. ಪುದುಚೇರಿ ಸಮೀಪ ಈ ಕೃತ್ಯ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ ಬಂದ ನಾಲ್ವರು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಮೇಲೆ ಕೊಲೆ ಪ್ರಕರಣದ ಆರೋಪ ವಿತ್ತು. ಅದುವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಇತ್ತೀಚೆಗೆ ಬಿಎಸ್‌ಪಿ ಘಟಕದ ಅಧ್ಯಕ್ಷ ಕೆ.ಆರ್ಮ್ಸ್ಟ್ರಾಂಗ್‌ ಹತ್ಯೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next