Advertisement

ಬೈಂದೂರು: ತಗ್ಗರ್ಸೆ ಕಂಬಳ ಸಂಪನ್ನ

01:35 AM Dec 05, 2018 | Karthik A |

ಬೈಂದೂರು: ಇತಿಹಾಸ ಪ್ರಸಿದ್ಧ ತಗ್ಗರ್ಸೆ ಹೆಗ್ಡೆ ಮನೆಯ ಕಂಬಳ ಗದ್ದೆಯಲ್ಲಿ ವಾರ್ಷಿಕ ಕಂಬಳ ಡಿ. 2ರಂದು ನಡೆಯಿತು. ಹಿರಿಯ, ಕಿರಿಯ ವಿಭಾಗದಲ್ಲಿ 70ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಿದ್ದ‌ವು. ಕಂಬಳ ಸ್ಪರ್ಧೆಯ ಸಬ್‌ ಜ್ಯೂನಿಯರ್‌ ಹಗ್ಗ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಣಪ ಗಂಗನಾಡು, ದ್ವಿತೀಯ ಸ್ಥಾನವನ್ನು ಸತ್ಯರಂಜನ್‌ ಹೆಗ್ಡೆ ಅರೆಶಿರೂರು ಪಡೆದರು. ಜ್ಯೂನಿಯರ್‌ ಹಗ್ಗ ವಿಭಾಗದಲ್ಲಿ ಆಶ್ರಿತಾ ವಿಶ್ವನಾಥ ಪೂಜಾರಿ ಕುದ್ರು ನಾವುಂದ ಪ್ರಥಮ, ಪನ್ನಗ ಹೆಬ್ಟಾರ್‌ ಕೊಡೇರಿ ದ್ವಿತೀಯ ಸ್ಥಾನ ಪಡೆದರು. ಸೀನಿಯರ್‌ ಹಗ್ಗ ವಿಭಾಗದಲ್ಲಿ ವೆಂಕಟ್‌ ಪೂಜಾರಿ ಸಸಿಹಿತ್ಲು, ಆನಂದ ದೇವಾಡಿಗ ಮೇಲ್‌ ಗುಡ್ಡೆಮೆನೆ ತೆಕ್ಕಟ್ಟೆ ದ್ವಿತೀಯ ಸ್ಥಾನ ಪಡೆದರು. ಹಲಗೆ (ಗೋರಿ) ವಿಭಾಗದಲ್ಲಿ ಶಾಂತರಾಮ ಶೆಟ್ಟಿ ಬಾರ್ಕೂರು ಪ್ರಥಮ, ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು ದ್ವಿತೀಯ ಸ್ಥಾನ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next