Advertisement

ನೆಹರೂ ಯುವಕೇಂದ್ರದ ಸ್ವಚ್ಛ ಭಾರತ್‌ ಇಂಟರ್ನ್ ಶಿಪ್ ಪ್ರೋಗಾಂ

04:05 AM May 29, 2018 | Team Udayavani |

ಬಡಗನ್ನೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್‌ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಮ್ಮಿಕೊಂಡಿರುವ ಸ್ವಚ್ಛ ಭಾರತ್‌ ಸಮ್ಮರ್‌ ಇಂಟರ್ನ್ ಶಿಪ್ ಪ್ರೋಗ್ರಾಂಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್‌ ಯುವಕ ಮಂಡಲವು ಸಾಥ್‌ ನೀಡಿದ್ದು, ಮೇ 27ರಂದು ನನ್ಯ ಶಾಲಾ ಆವರಣ ಸ್ವತ್ಛತೆಯ ಮೂಲಕ 3 ತಿಂಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಸ್ವಚ್ಛ ಭಾರತ್‌ ಇಂಟರ್ನ್ ಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಲೂಕಿನಿಂದ ಮೊದಲ ತಂಡವಾಗಿ ಕಾವು ನನ್ಯ ತುಡರ್‌ ಯುವಕ ಮಂಡಲ ಮೇ 4ರಂದು ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿದೆ. ಮೂರು ತಿಂಗಳಲ್ಲಿ 100 ಗಂಟೆಗಳ ಕಾರ್ಯಕ್ರಮದ ರೂಪುರೇಷೆ ತಯಾರಿಸಿ, ಮೇ 27ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

Advertisement

ನನ್ಯ ಶಾಲೆಯಲ್ಲಿ ಸ್ವಚ್ಛತೆ
ಯುವಕ ಮಂಡಲದ ನೂತನ ಅಧ್ಯಕ್ಷ ಗಂಗಾಧರ ನಾಯ್ಕ ಸ್ವಚ್ಛತಾ ಕಾರ್ಯ ಉದ್ಘಾಟಿಸಿ, ಸ್ವಚ್ಛ ಭಾರತ್‌ ಇಂಟರ್ನ್ ಶಿಪ್ ಯೋಜನೆಯ ಮೊದಲನೇ ಕಾರ್ಯಕ್ರಮವಾಗಿ ತುಡರ್‌ ಯುವಕ ಮಂಡಲವು ಮಾಟ್ನೂರು ಗ್ರಾಮದ ನನ್ಯ ಸರಕಾರಿ ಹಿ.ಪ್ರಾ ಶಾಲೆಯ ವಠಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದೆ. ಮೇ 29ರಂದು ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಬಂದ ಮೊದಲ ದಿನವೇ ಶಾಲೆಯ ವಾತಾವರಣ ಖುಷಿ ಕೊಡುವಂತಿರಬೇಕು, ಶುಚಿಯಾಗಿರಬೇಕು, ಕಲಿಕೆಗೆ ಪೂರಕವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಮುಂಚಿತವಾಗಿಯೇ ಶಾಲಾ ವಠಾರ, ಕೊಠಡಿಗಳು, ಶೌಚಾಲಯಗಳನ್ನು ಸ್ವತ್ಛಗೊಳಿಸಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಿ, ಮಕ್ಕಳ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.

ನನ್ಯ ಶಾಲಾ ಮುಖ್ಯಗುರು ನಾಗವೇಣಿ, ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಮಾಜಿ ಅಧ್ಯಕ್ಷ ಚಂದ್ರಶೇಖರ ಬಲ್ಯಾಯ, ಪ್ರಧಾನ ಕಾರ್ಯದರ್ಶಿ ನವೀನ ನನ್ಯಪಟ್ಟಾಜೆ, ಉಪಾಧ್ಯಕ್ಷ ಜಗದೀಶ ನಾಯ್ಕ, ಜತೆ ಕಾರ್ಯದರ್ಶಿ ಶ್ರೀಕಾಂತ್‌ ಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಸಂದೇಶ್‌ ಚಾಕೋಟೆ, ಕೋಶಾ ಕಾರಿ ಸತೀಶ ಮದ್ಲ, ಸದಸ್ಯರಾದ ಶ್ರೀಕುಮಾರ್‌, ಸಂಕಪ್ಪ ಪೂಜಾರಿ, ರಾಮಣ್ಣ ನಾಯ್ಕ ಆಚಾರಿಮೂಲೆ, ಧನಂಜಯ ನಾಯ್ಕ ಕುಂಞಿಕುಮೇರು, ರಾಜೇಶ್‌ ಬಿ., ನಿರಂಜನ ಕಾವು, ಸುನೀಲ್‌ ನಿ ಮುಂಡ, ದಿನೇಶ್‌ ಮದ್ಲ, ಹರ್ಷ ಎ.ಆರ್‌., ಮೋನಪ್ಪ ಎಂ., ರಶ್ಮಿತ್‌ ಆಚಾರಮೂಲೆ ಪಾಲ್ಗೊಂಡಿದ್ದರು.


3 ತಿಂಗಳಲ್ಲಿ 100 ಗಂಟೆಯ ಕಾರ್ಯಕ್ರಮ

ಮೇ 1ರಿಂದ ಕಾವು ನನ್ಯ ತುಡರ್‌ ಯುವಕ ಮಂಡಲ ಕಾರ್ಯಕ್ರಮ ಆರಂಭಿಸಿದ್ದು, ಜುಲೈ 31ರ ವರೆಗೆ ನಡೆಯಲಿದೆ. ಒಟ್ಟು 3 ತಿಂಗಳಲ್ಲಿ 100 ಗಂಟೆಗಳ ಕಾರ್ಯಕ್ರಮ ನಡೆಸಬೇಕಿದೆ. ಆಯಾ ಕಾರ್ಯಕ್ರಮಗಳ ಫೋಟೋ, ವರದಿ, ಪೇಪರ್‌ ಕಟ್ಟಿಂಗ್‌, ವೀಡಿಯೋ ಕ್ಲಿಪಿಂಗ್‌ಗಳನ್ನು ಆನ್‌ಲೈನ್‌ ಮೂಲಕವೇ ಲಾಗ್‌ ಇನ್‌ ಆಗಿ ಆಯಾ ದಿನದ ಪೂರ್ಣ ವರದಿಯನ್ನು ಇಲಾಖೆಗೆ ನೀಡಬೇಕಿದೆ.

ಬಹುಮಾನವೂ ಇದೆ
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಪ್ರೋತ್ಸಾಹಕವಾಗಿ ನೆಹರೂ ಯುವ ಕೇಂದ್ರದ ಮೂಲಕ ಹಲವು ಬಹುಮಾನಗಳನ್ನು ಘೋಷಿಸಿದೆ. ಉತ್ತಮ ಕೆಲಸ ನಿರ್ವಹಿಸಿದ ಯುವ ಸಂಸ್ಥೆಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.

Advertisement

ಏನಿದು ಯೋಜನೆ?
ನೆಹರೂ ಯುವ ಕೇಂದ್ರದಲ್ಲಿ ನೋಂದಣಿಯಾಗಿರುವ ಯುವ ಸಂಸ್ಥೆಗಳ ಸದಸ್ಯರು ಈ ಯೋಜನೆಗೆ ಕೈಜೋಡಿಸಬಹುದು. ಗ್ರಾಮೀಣ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವುದು, ಆರೋಗ್ಯ ಜಾಗೃತಿ, ಸ್ವಚ್ಛತೆ ಬಗ್ಗೆ ಬೀದಿನಾಟಕ, ರ್ಯಾಲಿ, ಸಾಂಸ್ಕೃತಿಕ ಕಾರ್ಯಕ್ರಮ, ನೈರ್ಮಲ್ಯ ಪದ್ಧತಿ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ, ಘನ ತ್ಯಾಜ್ಯ ನಿರ್ವಹಣೆ, ಬಯಲು ಮಲ ವಿಸರ್ಜನೆ ನಿಲ್ಲಿಸಲು ನಿಗಾ ಸಮಿತಿ ರಚನೆ, ಶೌಚಾಲಯ ನಿರ್ಮಾಣ ಇತ್ಯಾದಿ ಕಾರ್ಯಕ್ರಮ ನಡೆಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next