Advertisement

ಸುಶೀಲ್‌ ಕುಮಾರ್‌ ಕುಟುಂಬಕ್ಕೆ ಸಾಂತ್ವನ

12:04 PM Mar 05, 2018 | Team Udayavani |

ಬೀದರ: ಛತ್ತಿಸಗಡ್‌- ತೆಲಂಗಾಣ ಗಡಿ ಪ್ರದೇಶದಲ್ಲಿ ನಕ್ಸಲರ ವಿರುದ್ಧದ ಕೋಬಿಂಗ್‌ ಕಾರ್ಯಚರಣೆಯಲ್ಲಿ ವೀರ ಮರಣ ಹೊಂದಿರುವ ಬೀದರನ ನಕ್ಸಲ್‌ ನಿಗ್ರಹ ದಳದ ಜೂನಿಯರ್‌ ಕಮಾಂಡೋ ಸುಶೀಲಕುಮಾರ ಅವರ ನಿವಾಸಕ್ಕೆ ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ನೀಡಿ ಸಾಂತ್ವನ ಹೇಳಿದರು.

Advertisement

ರವಿವಾರ ಬೆಳಗ್ಗೆ ಸಚಿವರ ಮನೆಗೆ ತೆರಳಿ ಮೃತ ಯೋಧನ ಪತ್ನಿ ಸುಷ್ಮಾ ಮತ್ತು ತಂದೆ- ತಾಯಿಗೆ ಸಮಾಧಾನ ಹೇಳಿದರು. ಸರ್ಕಾರದಿಂದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ಈ ವೇಳೆ ವೀರ ಮರಣ ಹೊಂದಿದ ಸುಶೀಲಕುಮಾರ ಅವರ ಮೂರ್ತಿಯನ್ನು ಮತ್ತು ಅವರ ಹೆಸರಿನಲ್ಲಿ ವೃತ್ತವನ್ನು ನಗರದಲ್ಲಿ ಸ್ಥಾಪಿಸಬೇಕೆಂದು ಕರ್ನಾಟಕ ಕ್ರಿಶ್ಚಿಯನ್‌ ರಕ್ಷಣಾ ವೇದಿಕೆ ಅಧ್ಯಕ್ಷ ಆಲ್ಬರ್ಟ್‌ ಕೋಟೆ ನೇತೃತ್ವದಲ್ಲಿ ಸಚಿವರಿಗೆ ಮನವಿ ಮಾಡಲಾಯಿತು. 

ಶಾಸಕ ರಹೀಮ್‌ ಖಾನ್‌, ನಗರಸಭೆ ಸದಸ್ಯ ಧನರಾಜ ಹಂಗರಗೆ, ಪ್ರಮುಖರಾದ ಜೊಸೇಫ್‌, ಜೆಮ್ಸ್‌, ಸುಂದರ ಮತ್ತು ಯೇಸು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next