Advertisement

VIDEO: ಬಸ್ ನಲ್ಲಿ ಅರ್ಶದೀಪ್ ವಿರುದ್ಧ ಕೂಗಾಡಿದ ಸೂರ್ಯಕುಮಾರ್ ಯಾದವ್

09:11 AM Dec 16, 2023 | Team Udayavani |

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡವು ಟಿ20 ಸರಣಿಯನ್ನು ಸಮಬಲಗೊಳಿಸುವಲ್ಲಿ ಸಫಲವಾಗಿದೆ. ಅಂತಿಮ ಟಿ20 ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಶತಕದ ನೆರವಿನಿಂದ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿತ್ತು.

Advertisement

ಪಂದ್ಯದ ಬಳಿಕ ನಾಯಕ ಸೂರ್ಯ ಕುಮಾರ್, ಬೌಲರ್ ಅರ್ಶದೀಪ್ ಸಿಂಗ್ ವಿರುದ್ಧ ಕೋಪಗೊಂಡಿದ್ದಾರೆ. ಟೀಂ ಬಸ್ ನಲ್ಲಿ ಅರ್ಶದೀಪ್ ಕುಳಿತಿದ್ದರು. ಈ ವೇಳೆ ಬಂದ ಸೂರ್ಯಕುಮಾರ್ ಕೈಸನ್ನೆ ಮಾಡಿ ಎಚ್ಚರಿಕೆ ನೀಡಿದಂತೆ ಮಾತನಾಡಿದ್ದಾರೆ.

ಸೂರ್ಯಕುಮಾರ್ ಕೋಪಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಸೂರ್ಯಕುಮಾರ್ ಯಾದವ್ ಮತ್ತು ಅರ್ಶದೀಪ್ ಸಿಂಗ್ ನಡುವಿನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಜೋಹಾನ್ಸ್ ಬರ್ಗ್ ನಲ್ಲಿ ನಡೆದಿದ್ದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಸೂರ್ಯಕುಮಾರ್ ಯಾದವ್ ಎಂಟು ಸಿಕ್ಸರ್ ನೆರವಿನಿಂದ ನೂರು ರನ್ ಗಳಿಸಿದ್ದರು.

Advertisement

ಟಿ20 ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದ ಭಾರತ ಏಕದಿನ ಸರಣಿಗೆ ಸಿದ್ದವಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಡಿಸೆಂಬರ್ 17ರಂದು ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next