Advertisement

ಸದಾನಂದಗೌಡರಿಗೆ ಶಸ್ತ್ರಚಿಕಿತ್ಸೆ

11:59 AM Jun 10, 2018 | |

ಬೆಂಗಳೂರು: ಪ್ರಾಸ್ಟೇಟ್‌ ಗ್ರಂಥಿ ಸಮಸ್ಯೆಯಿಂದಾಗಿ ಹೆಬ್ಟಾಳದ ಸಿಎಂಐ ಆಸ್ಟರ್‌ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ವೈದ್ಯರು ಶನಿವಾರ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

Advertisement

ಡಾ.ಅವಿನಾಶ್‌ ನೇತೃತ್ವದ ತಜ್ಞರ ತಂಡ ಶನಿವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಧ್ಯಾಹ್ನ ಸಚಿವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಸದಾನಂದಗೌಡ ಅವರು ಆರೋಗ್ಯವಾಗಿದ್ದು, ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ. ಎರಡು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next