Advertisement

ಗೋ ಹತ್ಯೆ ವಿರುದ್ಧ ಆಸ್ತಿ ಮುಟ್ಟುಗೋಲು ಅಸ್ತ್ರ

11:25 PM Oct 27, 2022 | Team Udayavani |

ಸುರತ್ಕಲ್‌: ಉತ್ತರ ಪ್ರದೇಶದ ಯೋಗಿ ಸರಕಾರದ ಆಡಳಿತದ ಮಾದರಿಯಲ್ಲೇ ರಾಜ್ಯದಲ್ಲೂ ಅಕ್ರಮ ಗೋ ಹತ್ಯೆ ದಂಧೆಕೋರರಿಗೆ ಆಸ್ತಿ ಮುಟ್ಟುಗೋಲಿನ ಬಿಸಿ ತಟ್ಟಿದೆ.

Advertisement

ಕಂದಾಯ ಇಲಾಖೆಯು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಾಂ 8 (4) ಅಡಿಯಲ್ಲಿ ಗಂಜಿಮಠದ ಯೂಸುಫ್‌, ಅರ್ಕುಳದ ಬಾತೀಶ್‌, ಕಾಟಿಪಳ್ಳದ ಹಕೀಂ ಅವರ ಜಾಗವನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಹಟ್ಟಿಯಿಂದ ದನ ಕಳ್ಳತನ, ಅಕ್ರಮ ವಧೆ ವಿರುದ್ಧ ಎರಡು ತಿಂಗಳ ಹಿಂದೆ ಜಾರಿಯಾದ ಗೋ ಹತ್ಯೆ ಪ್ರತಿಬಂಧಕ ಕಾನೂನಿಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಶಾಸಕ ಡಾ| ಭರತ್‌ ಶೆಟ್ಟಿ ವೈ. ಸೂಚನೆ ನೀಡಿದ್ದರು. ಅದರಂತೆ ಸಹಾಯಕ ಆಯುಕ್ತ ಮದನಮೋಹನ್‌ ಮುಟ್ಟುಗೋಲು ಹಾಕಿಕೊಂಡು ಆ ಜಾಗವನ್ನು ಮಾರಾಟ ಮಾಡದಂತೆ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ಕ್ರಮ ಕೈಗೊಂಡಿದ್ದಾರೆ.

ಮಂಗಳೂರು ಉತ್ತರದ ಶಾಸಕ ಭರತ್‌ ಶೆಟ್ಟಿ ಪ್ರತಿಕ್ರಿಯಿಸಿ, ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯನ್ವಯ ಕ್ರಮ ಆಗಿದೆ. ಈ ಕ್ರಮ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next