Advertisement

ಅಜೇಯ್‌ ರಾವ್‌ ‘ಯುದ್ಧಕಾಂಡ’ಕ್ಕೆ ಸುಪ್ರೀತಾ ಸತ್ಯನಾರಾಯಣ್‌ ನಾಯಕಿ

01:02 PM May 26, 2023 | Team Udayavani |

“ಕೃಷ್ಣಲೀಲಾ’ ಸಿನಿಮಾದ ನಂತರ ನಟ ಅಜೇಯ್‌ ರಾವ್‌ ತಮ್ಮ “ಅಜೇಯ್‌ ರಾವ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ “ಯುದ್ಧಕಾಂಡ’ ಸಿನಿಮಾವನ್ನು ನಿರ್ಮಿಸುತ್ತಿರುವುದು ನಿಮಗೆ ಗೊತ್ತಿರಬಹುದು. ಸದ್ಯ “ಯುದ್ಧಕಾಂಡ’ ಸಿನಿಮಾದ ಶೂಟಿಂಗ್‌ ಭರದಿಂದ ನಡೆಯುತ್ತಿದ್ದು, ಇದೀಗ ಈ ಸಿನಿಮಾಕ್ಕೆ ಮತ್ತೂಬ್ಬ ನಟಿಯ ಆಗಮನವಾಗಿದೆ. ಅವರೇ ಸುಪ್ರೀತಾ ಸತ್ಯನಾರಾಯಣ್‌.

Advertisement

ಹೌದು, ಕಿರುತೆರೆಯಲ್ಲಿ “ಸೀತಾವಲ್ಲಭ’ ಮತ್ತು “ಸರಸು’ ಮೊದಲಾದ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ನಟಿ ಸುಪ್ರೀತಾ ಸತ್ಯನಾರಾಯಣ್‌, ಈಗ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡುತ್ತಿದ್ದಾರೆ. ಸದ್ಯ “ಮೆಲೋಡಿ ಡ್ರಾಮಾ’ ಚಿತ್ರದ ಮೂಲಕ ಸುಪ್ರೀತಾ ಸತ್ಯನಾರಾಯಣ್‌ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿದ್ದಾರೆ.

ಇನ್ನೇನು “ಮೆಲೋಡಿ ಡ್ರಾಮಾ’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತಿರುವಂತೆಯೇ, ಸುಪ್ರೀತಾ ಅಜೇಯ್‌ ರಾವ್‌ ನಟನೆ ಮತ್ತು ನಿರ್ಮಾಣದ “ಯುದ್ಧಕಾಂಡ’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ತಮ್ಮ ಹೊಸಚಿತ್ರ “ಯುದ್ಧಕಾಂಡ’ದ ಬಗ್ಗೆ ಮಾತನಾಡುವ ಸುಪ್ರೀತಾ ನಾರಾಯಣ್‌, “ಇದೇ ಮೊದಲ ಬಾರಿಗೆ ಅಜೇಯ್‌ ರಾವ್‌ ಅವರೊಂದಿಗೆ ಕೆಲಸ ಮಾಡುವ ಅವಕಾಶ “ಯುದ್ಧಕಾಂಡ’ ಸಿನಿಮಾದಲ್ಲಿ ಸಿಕ್ಕಿದೆ. ಇದೊಂದು ಕೋರ್ಟ್‌ ರೂಮ್‌ ಡ್ರಾಮಾ ಸಿನಿಮಾ. ಇದರಲ್ಲಿ ನಾನು ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸುಮಾರು 15-20 ದಿನಗಳ ಕಾಲಗಳ ಈ ಸಿನಿಮಾದಲ್ಲಿ ನನ್ನ ಪಾತ್ರದ ಶೂಟಿಂಗ್‌ ಇರಲಿದೆ. ಈಗಾಗಲೇ ಒಂದಷ್ಟು ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೇನೆ’ ಎನ್ನುತ್ತಾರೆ.

Advertisement

“ಯುದ್ಧಕಾಂಡ’ ಸಿನಿಮಾದಲ್ಲಿ ನಟ ಅಜೇಯ್‌ ರಾವ್‌ ಕೂಡ ವಕೀಲರಾಗಿ ಕಾಣಿಸಿಕೊಳ್ಳುತ್ತಿದ್ದು, ಇದೇ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

 ಜಿ. ಎಸ್‌. ಕಾರ್ತಿಕ ಸುಧನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next