Advertisement

ಅಂಗವಿಕಲರಿಗೆ ಸೌಲಭ್ಯ ವಿತರಣೆ ಆಸರೆಯಾದ ಸಂಸದರ ನಿಧಿ

01:00 AM Mar 10, 2019 | Harsha Rao |

ಕಾಸರಗೋಡು: ಸಂಸದ ಪಿ.ಕರುಣಾಕರನ್‌ ಅವರ ಸ್ಥಳೀಯ ಅಭಿವೃದ್ಧಿ ನಿಧಿ ಅಂಗವಿಕಲರಿಗೆ ಕೈಯಾಸರೆಯಾಗಿದೆ. ಈ ನಿಧಿ ಬಳಸಿ ಅಂಗವಿಕಲರಿಗೆ ವಿದ್ಯುನ್ಮಾನ ಗಾಲಿ ಕುರ್ಚಿ, ಬದಿ ಗಾಲಿ ಅಳವಡಿಸಿದ ತ್ರಿಚಕ್ರ ವಾಹನ ಇತ್ಯಾದಿ ವಿತರಣೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಸಂಸದ ಪಿ.ಕರುಣಾಕರನ್‌ ಈ ಸಲಕರಣೆಗಳ ವಿತರಣೆ ನಡೆಸಿದರು. 99,500 ರೂ. ಮೌಲ್ಯದ ಎರಡು ವಿದ್ಯುನ್ಮಾನ ಗಾಲಿಕುರ್ಚಿ, 81 ಸಾವಿರ ರೂ. ಮೌಲ್ಯದ ತ್ರಿಚಕ್ರ ವಾಹನ ಖರೀದಿಸಿ ವಿತರಿಸಲಾಗಿದೆ.

Advertisement

ಸಾಮಾಜಿಕ ನ್ಯಾಯ ಇಲಾಖೆಗೆ ಸಲ್ಲಿಸಲಾದ ಅರ್ಜಿಗಳ ಹಿನ್ನೆಲೆಯಲ್ಲಿ ಅರ್ಹರ ಆಯ್ಕೆ ನಡೆಸಲಾಗಿದ್ದು, ಚಂದೇರ ಕಾಂಞಿರಿಕ್ಕಲ್‌ ಹೌಸ್‌ ನಿವಾಸಿ ಕೆ.ರಾಜೀವನ್‌(48), ಎಡನೀರಿನ ಪಾಡಿ ಕನ್ನಿಕುಂಡ್‌ ನಿವಾಸಿ ವಾಮನ(35) ಅವರಿಗೆ ವಿದ್ಯುನ್ಮಾನ ಗಾಲಿ ಕುರ್ಚಿ, ಮಡಿಕೈ ಚದುರಕಿಣರ್‌ ಚೆಟ್ಟಿ ವೀಟ್ಟಿಲ್‌ ನಿವಾಸಿ ಗಣೇಶನ್‌(35) ಅವರಿಗೆ ತ್ರಿಚಕ್ರ ವಾಹನ ಲಭಿಸಿದೆ.

ಈ ಸಂದರ್ಭ ಮಾತನಾಡಿದ ಸಂಸದ ಅವರು ಕಾಸರಗೋಡು ಕ್ಷೇತ್ರದಲ್ಲಿ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯ ಮೊಬಲಗಿನಲ್ಲಿ ಶೇ.98 ವಿನಿಯೋಗಿಸಲಾಗಿದೆ. ಇದರಲ್ಲಿ ಹತ್ತು ಕಡೆ ಅಂಗವಿಕಲರ ಸಹಾಯಕ್ಕೆ ಸಲಕರಣೆಗಳನ್ನು  ಖರೀದಿಸಿ ವಿತರಿಸಲಾಗಿದೆ ಎಂದು ತಿಳಿಸಿದರುನಬಾರ್ಡ್‌ ಆರ್‌.ಐ.ಡಿ.ಎಫ್‌ ಯೋಜನೆಯನ್ನು ಎಂಡೋಸಲ್ಫಾನ್‌ ಸಂತ್ರಸ್ತರ ವಲಯದಲ್ಲಿ ಜಾರಿಗೊಳಿಸಲು ಸಾಧ್ಯವಾದುದು ದೊಡ್ಡ ಸಾಧನೆ ಎಂದರು.

ಸಮಾಜದ ಮುಖ್ಯವಾಹಿನಿಯಿಂದ ಬೇರ್ಪಟ್ಟ ಜನಾಂಗದವರ ಸೌಲಭ್ಯಕ್ಕೂ ಸಹಾಯ ಒದಗಿಸಲು ನಿಧಿಯ ಮೂಲಕ ಸಾಧ್ಯವಾಗಿದೆ ಎಂದವರು ಹೇಳಿದರು. ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾಮಾಜಿಕ ನ್ಯಾಯ ಇಲಾಖೆ ಅಧಿಕಾರಿ ಎನ್‌.ಭಾಸ್ಕರನ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next