Advertisement

ಬಿಸಿಲಾಘಾತ: Maharashtra ದಲ್ಲಿ ಬಹಿರಂಗ ಸಭೆಯಿಲ್ಲ

09:47 PM Apr 19, 2023 | Team Udayavani |

ಮುಂಬೈ: ಕೆಲವು ದಿನಗಳ ಹಿಂದೆ ಬಿಸಿಲಿನ ಝಳಕ್ಕೆ 13 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪಾಠ ಕಲಿತಿರುವ ಮಹಾರಾಷ್ಟ್ರ ಸರ್ಕಾರ, ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆವರೆಗೆ ಯಾವುದೇ ಬಹಿರಂಗ ಸಮಾರಂಭಗಳನ್ನು ಹಮ್ಮಿಕೊಳ್ಳದೇ ಇರಲು ತೀರ್ಮಾನಿಸಿದೆ. ನವೀಮುಂಬೈನಲ್ಲಿ ಭಾನುವಾರ ಮಹಾರಾಷ್ಟ್ರ ಸರ್ಕಾರದ ವತಿಯಿಂದ ಸಮಾಜ ಸೇವಕ ಅಪ್ಪಾಸಾಹೇಬ್‌ ಧರ್ಮಾಧಿಕಾರಿ ಅವರಿಗೆ “ಮಹಾರಾಷ್ಟ್ರ ಭೂಷಣ್‌” ಪ್ರದಾನ ಸಮಾರಂಭ ಏರ್ಪಡಿಸಲಾಗಿತ್ತು.

Advertisement

ಈ ವೇಳೆ ಸುಮಾರು 20 ಲಕ್ಷ ಮಂದಿ ಅಪ್ಪಾಸಾಹೇಬ್‌ ಅಭಿಮಾನಿಗಳು ಭಾಗವಹಿಸಿದ್ದರು. ಬಿಸಿಲಿನ ತಾಪಕ್ಕೆ 13 ಮಂದಿ ಅಸುನೀಗಿದರು. ತಲೆ ತಿರುಗಿ ಬಿದ್ದು 600ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾದರು. ಸೂಕ್ತ ವ್ಯವಸ್ಥೆ ಕಲ್ಪಿಸದ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ಧಾಳಿ ನಡೆಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next