Advertisement

Sullia ತೆಂಗಿನ ಮರ ಬಿದ್ದು ಮನೆಗೆ ಹಾನಿ

11:04 PM Jul 25, 2024 | Team Udayavani |

ಸುಳ್ಯ: ಮಂಡೆಕೋಲು ಗ್ರಾಮದ ಶಾಲಾ ಬಳಿಯ ಭವಾನಿಶಂಕರ ಆಚಾರ್ಯ ಅವರ ಮನೆಗೆ ಗುರುವಾರ ಬೆಳಗ್ಗೆ ತೆಂಗಿನ ಮರ ಬುಡ ಸಹಿತ ಬಿದ್ದು ಮನೆಗೆ ಹಾನಿ ಸಂಭವಿಸಿದೆ.

Advertisement

ಗುರುವಾರ ಬೆಳಗ್ಗೆ ಬೀಸಿದ ಗಾಳಿ-ಮಳೆಗೆ ಪಕ್ಕದಲ್ಲೇ ಇದ್ದ ಬೃಹತ್‌ ಗಾತ್ರದ ತೆಂಗಿನಮರ ಬುಡ ಸಹಿತ ಬಿದ್ದು ಮನೆಯ ಮೇಲ್ಛಾವಣಿಗೆ ಹಾನಿಯುಂಟಾಗಿದೆ. ಮನೆಯೊಳಗೆ ಭವಾನಿಶಂಕರ ಅವರ ತಾಯಿ ಹಾಗೂ ಪತ್ನಿ ಇದ್ದರು. ಅಪಾಯದಿಂದ ಪಾರಾಗಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next