Advertisement

Sullia: ಕಾಲೇಜಿಗೆ ಅಕ್ರಮ ಪ್ರವೇಶ ಆರೋಪ; ಪ್ರಕರಣ ದಾಖಲು

12:37 AM Oct 08, 2023 | Team Udayavani |

ಸುಳ್ಯ: ಕಾಲೇಜಿಗೆ ಅಕ್ರಮವಾಗಿ ಪ್ರವೇಶಿಸಿ ಸಿಬಂದಿಯನ್ನು ಬೆದರಿಸಲಾಗಿದೆ ಎಂಬ ಬಗ್ಗೆ ಅಜ್ಜಾವರ ಗ್ರಾಮದ ಕಾಂತಮಂಗಲದ ಡಾ| ಜ್ಯೋತಿ ಆರ್‌. ಪ್ರಸಾದ್‌ ನೀಡಿರುವ ದೂರಿನ ಆಧಾರದಲ್ಲಿ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಡಾ| ಜ್ಯೋತಿ ಆರ್‌. ಪ್ರಸಾದ್‌ ಅವರು ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿದ್ದರು. ಇದನ್ನು ಗಮನಿಸಿದ ಆರೋಪಿಗಳಾದ ದೂರುದಾರರ ಭಾವ ಡಾ| ಚಿದಾನಂದ, ಅವರ ಪತ್ನಿ ಶೋಭಾ ಚಿದಾನಂದ, ಮಗ ಅಕ್ಷಯ್‌ ಕೆ.ಸಿ., ಮಗಳು ಡಾ| ಐಶ್ವರ್ಯಾ, ಸಂಬಂದಿ ಹೇಮನಾಥ ಕೆ.ವಿ., ಜಗದೀಶ್‌ ಅಡ್ತಲೆ ಮತ್ತು ಅವರ ಇತರ ಸಿಬಂದಿ ಡಾ| ಜ್ಯೋತಿ ಆರ್‌.ಪ್ರಸಾದ್‌ ಹಾಗೂ ಅವರ ಪತಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಕುರುಂಜಿಭಾಗ್‌ನಲ್ಲಿರುವ ಪಾಲಿಟೆಕ್ನಿಕ್‌ ಕಾಲೇಜಿಗೆ ಅಕ್ರಮವಾಗಿ ಪ್ರವೇಶಿಸಿ ಪ್ರಾಂಶುಪಾಲರು ಹಾಗೂ ಸಿಬಂದಿಯ ಮೊಬೈಲ್‌, ಸಿಸಿ ಕೆಮರಾ ಮುಂತಾದವುಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಮೊಬೈಲ್‌ಗ‌ಳನ್ನು ಹಿಂದಿರುಗಿಸಿ, ಬೆದರಿಸಿ ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next