Advertisement

ಚುನಾವಣಾ ವಿಜೇತ ಸ್ಪರ್ಧಿ ಸುಜಾತಾ ಶೆಟ್ಟಿ ಅವರ ವಿಜಯೋತ್ಸವ

04:14 PM Mar 03, 2017 | |

ಪುಣೆ: ಪುಣೆ ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಕಸ್ಬಾಪೇಟ್‌, ಸೋಮವಾರ್‌ ಪೇಟೆ ಪ್ರಭಾಗ ಕ್ರಮಾಂಕ 16ರಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಹುಮತದಿಂದ ವಿಜಯ ಗಳಿಸಿದ ತುಳು-ಕನ್ನಡಿಗ ಸುಜಾತಾ ಸದಾನಂದ ಶೆಟ್ಟಿ ಅವರು ಫೆ. 26 ರಂದು ಕಸ್ಬಾಪೇಟ, ಸೋಮವಾರ್‌ ಪೇಟ್‌ ಪರಿಸರದಲ್ಲಿ ತೆರೆದ ಜೀಪಿನಲ್ಲಿ ವಿಜಯೋತ್ಸವವನ್ನು ಆಚರಿಸಿದರು.

Advertisement

ಈ ಸಂದರ್ಭ ಅವರ ಪತಿ ಪುಣೆ ಮಹಾನಗರಪಾಲಿಕೆಯ ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಸದಾನಂದ ಕೃಷ್ಣ ಶೆಟ್ಟಿ ಮತ್ತು ಕುಟುಂಬ ಸದಸ್ಯರಾದ ಪುರುಷೋತ್ತಮ ಶೆಟ್ಟಿ, ಪ್ರೇಮಾ ಪಿ. ಶೆಟ್ಟಿ, ಸದಾಶಿವ ಶೆಟ್ಟಿ, ಅಡ್ವೊಕೇಟ ರೋಹನ್‌ ಪಿ. ಶೆಟ್ಟಿ ಅವರು ಉಪಸ್ಥಿತರಿದ್ದು ಸುಜಾತಾ ಶೆಟ್ಟಿ ಅವರಿಗೆ ಸಾಥ್‌ ನೀಡಿದರು.

ವಿಜಯೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಸ್ಥಳೀಯ ಪದಾಧಿಕಾರಿಗಳು, ಕಾರ್ಯಕರ್ತರು, ತುಳು-ಕನ್ನಡಿಗರು, ಅನ್ಯಭಾಷಿಕರು, ರಾಜಕೀಯ ಧುರೀಣರು, ಸಮಾಜ ಸೇವಕರು, ಉದ್ಯಮಿಗಳು  ಉಪಸ್ಥಿತರಿದ್ದು, ವಿಜೇತರಾದ ಸುಜಾತಾ ಎಸ್‌. ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. 

   ಚಿತ್ರ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next