Advertisement

ವಿದ್ಯುತ್‌ ಸ್ಪರ್ಶಿಸಿ ನಾಲ್ಕು ಎಕರೆ ಕಬ್ಬು ಸಂಪೂರ್ಣ ನಾಶ

02:58 PM Oct 12, 2021 | Team Udayavani |

ಎಚ್‌.ಡಿ.ಕೋಟೆ: ವಿದ್ಯುತ್‌ ಸ್ಪರ್ಶಿಸಿ ಕಟಾವಿಗೆ ಬಂದಿದ್ದ 4 ಎಕರೆ ಕಬ್ಬು ಸುಟ್ಟು ಹೋಗಿರುವ ಘಟನೆ ಸರಗೂರು ಕೊತ್ತೇಗಾಲದ ಜಮೀನಿನಲ್ಲಿ ನಡೆದಿದೆ. ಕೊತ್ತೇಗಾಲ ಗ್ರಾಮದ ನಿವಾಸಿ ಚಲುವರಾಜು ತಮ್ಮ 4 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು.

Advertisement

ಇದನ್ನೂ ಓದಿ;- ರಸ್ತೆ ಅಗಲೀಕರಣ ಕಾಮಗಾರಿಗೆ ಸಹಕಾರ ನೀಡಿ

10 ತಿಂಗಳ ಅವಧಿಯ ಕಬ್ಬು ಇನ್ನೇರಡು ತಿಂಗಳಲ್ಲಿ ಕಟಾವು ಮಾಡಬೇಕಿತ್ತು. ಈ ಜಮೀನಿನ ಮಾರ್ಗವಾಗಿ ಹಾದು ಹೋಗಿದ್ದ ವಿದ್ಯುತ್‌ ತಂತಿಗಳು ಜೋತಾಡುತ್ತಾ ಭೂಮಿಗೆ ತಾಗುವಂತಿತ್ತು. ಈ ನಡುವೆ, ಜೋರು ಗಾಳಿ ಬೀಸಿದಾಗ ತಂತಿಗಳು ಒಂದಕ್ಕೊಂದು ತಾಗಿ ವಿದ್ಯುತ್‌ ಸ್ಪರ್ಶದಿಂದ ಬೆಂಕಿ ಕಿಡಿ ಬಿದ್ದಾಗ ಕೆಲವೇ ಕ್ಷಣದಲ್ಲಿ ಸಿಬ್ಬಂದಿ ತಂತಿಗಳನ್ನು ದುರಸ್ತಿ ಪಡಿಸಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ, ಘಟನೆಗೆ ಸೆಸ್ಕ್ ನಿರ್ಲಕ್ಷ್ಯವೇ ಕಾರಣ.  ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಜಮೀನಿನ ಮಾಲಿಕರು ಮನವಿಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next