Advertisement

ಸಿರಿ ಸೇನಗೆ ಸಂಕಷ್ಟ?

09:00 AM Nov 11, 2018 | Team Udayavani |

ಕೊಲಂಬೊ: ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿರುವ ಅಲ್ಲಿನ ರಾಷ್ಟ್ರಾಧ್ಯಕ್ಷ ಮೈತಿಪಾಲ ಸಿರಿಸೇನ ಅವರ ಕ್ರಮವನ್ನು ನ್ಯಾಯಾಲಯದಲ್ಲಿ ತಮ್ಮ ಪಕ್ಷ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಪ್ರಶ್ನಿಸುತ್ತದೆ ಎಂದು ಪದಚ್ಯುತ ‌ಪ್ರಧಾನಿ ರನಿಲ್‌ ವಿಕ್ರಮಸಿಂಘೆ ತಿಳಿಸಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಮಂಗಳ ಸಮರವೀರ ಸಹ ಪ್ರತಿಕ್ರಿಯಿಸಿದ್ದು, ಸಿರಿಸೇನ ದಬ್ಟಾಳಿಕೆ ವಿರುದ್ಧ ನ್ಯಾಯಾಲಯದಲ್ಲಿ ಮಾತ್ರವಲ್ಲ, ಸಂಸತ್ತಿನಲ್ಲಿ ಹಾಗೂ ಚುನಾವಣೆಯಲ್ಲೂ ಹೋರಾಡುವುದಾಗಿ ತಿಳಿಸಿದ್ದಾರೆ. ಪ್ರಧಾನಿಯಾಗಿದ್ದ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ ಆ ಸ್ಥಾನಕ್ಕೆ ತಾವು ತಂದು ಕೂರಿಸಿರುವ ಮಹಿಂದಾ ರಾಜಪಕ್ಸೆಗೆ ಸಂಸತ್ತಿನಲ್ಲಿ ವಿಶ್ವಾಸಮತ ದೊರಕುವುದು ಅನುಮಾನವಾಗಿದ್ದರಿಂದ ಸಿರಿಸೇನ ಅವರು ಸಂಸತ್ತನ್ನು ಗುರುವಾರ ವಿಸರ್ಜಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next