Advertisement

ದರ್ಶನ್‌ ಕೈ ಹಿಡಿದ್ರೆ ಸುದೀಪ್‌ ಕೈಗೆ ಕಮಲ ? 

12:12 PM Sep 01, 2017 | |

ಬೆಂಗಳೂರು : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾಲಿದ್ದಾರೆ ಎನ್ನುವ ಊಹಾಪೋಹಗಳ ಬೆನ್ನಲ್ಲೇ ಸಮಕಾಲಿನ ಇನ್ನೋರ್ವ ಸ್ಟಾರ್‌ ನಟ ಕಿಚ್ಚ ಸುದೀಪ್‌ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಕುರಿತು ಚರ್ಚೆಗಳು ಆರಂಭವಾಗಿವೆ. 

Advertisement

ಸುದೀಪ್‌ ಅವರೊಂದಿಗೆ ಈಗಾಗಲೇ ಉತ್ತಮ ಬಾಂಧವ್ಯ ಹೊಂದಿರುವ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರು ಮಾತುಕತೆ ನಡೆಸಿದ್ದಾರೆ . 

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅಶೋಕ್‌ ‘ನಾನು ಮತ್ತು ಸುದೀಪ್‌ ಒಳ್ಳೆಯ ಸ್ನೇಹಿತರು. ಅವರೊಂದಿಗೆ ನಾನು ಮಾತಾಡ್ತೇನೆ. ನನ್ನ ಚುನಾವಣಾ ಪ್ರಚಾರ ಉದ್ಘಾಟಿಸಿದ್ದೆ ಸುದೀಪ್‌” ಎಂದು ಹೇಳಿಕೆ ನೀಡಿದ್ದಾರೆ. 

ಸುದೀಪ್‌ ಅವರು ರಾಜಕೀಯ ಸೇರ್ಪಡೆಯ ಕುರಿತು ಈ ಹಿಂದೆ ನಿರಾಸಕ್ತಿ ಹೊಂದಿದ್ದರು. ಇದೀಗ ಮೋದಿ ಪ್ರಭಾಕ್ಕೆ ಒಳಗಾಗಿ ಕಮಲ ತೆಕ್ಕೆಗೆ ಸೇರ್ಪಡೆಯಾಗಲಿದ್ದಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ. 

ವಾಲ್ಮೀಕಿ ಸಮಾಜದ ದೊಡ್ಡ ಸಾಧಕರಲ್ಲಿ ಒಬ್ಬರಾದ ಸುದೀಪ್‌ ಅವರು ಬಿಜೆಪಿಗೆ ಸೇರ್ಪಡೆಯಾದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ (ಎಸ್‌ಟಿ) ಟಿಕೇಟ್‌ ನೀಡಲಾಗುತ್ತದೆ ಎನ್ನಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next