Advertisement

ನಾಮ ನಿರ್ದೇಶನ ಮಾಡಿದರೆ ಹೋರಾಟ

05:37 AM Jun 09, 2020 | Lakshmi GovindaRaj |

ಮಳವಳ್ಳಿ: ಅವಧಿ ಮುಕ್ತಾಯಗೊಂಡಿರುವ ಗ್ರಾಪಂಗಳಿಗೆ ಬಿಜೆಪಿ ಕಾರ್ಯಕರ್ತರ ನಾಮನಿದೇರ್ಶನ ಮಾಡಲು ಮುಂದಾದರೆ ಹೋರಾಟ ಅನಿವಾರ್ಯ ಎಂದು ಶಾಸಕ ಡಾ. ಕೆ.ಅನ್ನದಾನಿ ಹೇಳಿದರು. ತಾಲೂಕಿನ ಗೌಡಗೆರೆ ಗ್ರಾಮದ  ಹೊರವಲ ಯದ ಕೆರೆ ಹಳ್ಳಕ್ಕೆ ಹಾರ್ಡ್‌ಪಾಥ್‌ ನಿರ್ಮಿ ಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೊರೊನಾ ನೆಪವಾಗಿಟ್ಟುಕೊಂಡು ಗ್ರಾಪಂ ಚುನಾವಣೆ ಮುಂದೂಡಿಕೆ ಮಾಡಿ ತಮ್ಮ ಪಕ್ಷದ ಕಾರ್ಯಕರ್ತರ ನೇಮಕಕ್ಕೆ  ಮುಂದಾಗುತ್ತಿರುವುದು ಸರಿಯಲ್ಲ.

Advertisement

ಇದು ಬಿಜೆಪಿ ಪ್ರಜಾ ಪ್ರಭುತ್ವ ವಿರೋಧಿ ನಡೆ. ಪಕ್ಷದ ಚಿಹ್ನೆ ಮೇಲೆ ನಡೆಯುವ ಚುನಾ ವಣೆಯಲ್ಲ.ಹೀಗಾಗಿ ಹಾಲಿ ಸದಸ್ಯರನ್ನೇ ಮುಂದುವರಿಸ ಬೇಕು ಎಂ ದರು. ತಾಲೂಕಿನ  ಕೆಂಬೂತಗೆರೆ ಗ್ರಾಮದ ಹೆಬ್ಟಾಳ ಚೆನ್ನಯ್ಯ ನಾಲೆ ಎಡ ದಂಡೆ,ಸುಜ್ಜಲೂರು ಕೆರೆಯ ಎಡದಂಡೆ,ಕಲ್ಕುಣಿ ದೊಡ್ಡಕೆರೆ ಎಡದಂಡೆ, ಬಲದಂಡೆ, ಹೂವಿನ ಕೊಪ್ಪಲು ಗ್ರಾಮದ ಪರಿಶಿಷ್ಟ ಕಾಲೋನಿಗೆ ಸಿಸಿ ರಸ್ತೆ ಮತ್ತು ಡ್ರೆçನ್‌ ನಿರ್ಮಾಣ ಸೇರಿದಂತೆ 1.10 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿ  ದೆ. ಕುಮಾರಸ್ವಾಮಿ ಅವಧಿ ಯಲ್ಲಿ ಅನುಮೋ ದನೆ ಆಗಿರುವ ಕೆಲ ಕಾಮಗಾರಿಗಳನ್ನು ರಾಜ್ಯ ಸರ್ಕಾರ ತಡೆಹಿಡಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ವಿಶ್ವನಾಥ್‌ ಹೇಳಿಕೆಗೆ ಖಂಡನೆ: ಈಗ ಮೈತ್ರಿ ಸರ್ಕಾರ ಇದ್ದಿದ್ದರೆ 50 ಸಾವಿರ ಜನ ಸಾವನ್ನಪ್ಪುತ್ತಿ ದ್ದರು ಎಂಬ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹೇಳಿಕೆ ಸರಿಯಲ್ಲ. ಅವರು ಯಾವಾಗ ಜ್ಯೋತಿ ಷಿ ಯಾದರೂ ಗೊತ್ತಿಲ್ಲ. ಅವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು. ಅಗಸ ನಪುರ ಗ್ರಾಪಂ ಅಧ್ಯಕ್ಷೆ ಕೆಂಪೇಗೌಡ, ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ಮಲ್ಲೇಗೌಡ, ಹಿಂದುಳಿದ ವರ್ಗಗಳ ಅಧ್ಯಕ್ಷ ಸಿದ್ದಾಚಾರಿ, ರಾಮಕೃಷ್ಣ, ಶಂಕರ್‌, ಪುಟ್ಟಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next