Advertisement

ಮಾಳಗಡ್ಡೆ ಬಡಾವಣೆಗೆ ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಹೋರಾಟ

11:47 AM Jun 16, 2020 | mahesh |

ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಮಾಳಗಡ್ಡೆ  ಬಡಾವಣೆಯಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಮಾಳಗಡ್ಡೆ ಹೋರಾಟ ಸಮಿತಿ ವತಿಯಿಂದ ನಗರದ ಜಿಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ಶ್ರೀಧರಗಡ್ಡೆ ಗ್ರಾಮದ ಮಾಳಗಡ್ಡೆ ಬಡವಣೆಯಲ್ಲಿ ಸುಮಾರು  150 ಮನೆಗಳಿವೆ. ಈ ಬಡಾವಣೆಯಲ್ಲಿ ವಾಸಮಾಡುತ್ತಿರುವ ಜನತೆ, ಕೃಷಿ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಾಗಿರುತ್ತಾರೆ . ಇವರೆಲ್ಲರಿಗೂ 1981ರಲ್ಲಿ ಮತ್ತು 1991ರಲ್ಲಿ ಆಶ್ರಯ ಯೋಜನೆಯಡಿ ಹಾಗೂ 1995ರಲ್ಲಿ ಇಂದಿರಾ ಆವಾಸ್‌ ಯೋಜನೆಯಡಿ ಸರ್ಕಾರವು ಪಟ್ಟಾ ಮಂಜೂರು ಮಾಡಿದೆ. ವಿಪರ್ಯಾವೆಂದರೆ, ಈ ಬಡಾವಣೆಯಲ್ಲಿ ಪಂಚಾಯಿತಿ ಪ್ರಾಧಿಕಾರವು ಕಳೆದ 10-15 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ.

Advertisement

ಶೌಚಾಲಯ ನಿರ್ಮಿಸಲು ಯೋಜನೆಯಿದ್ದರೂ ಹಣ ನೀಡಿಲ್ಲ. ಸುಸಜ್ಜಿತ ರಸ್ತೆ ನಿರ್ಮಿಸಿಲ್ಲ. ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಜನತೆ ದಿನಂಪ್ರತಿ ಸಮಸ್ಯೆಗಳ ಸುಳಿಯಲ್ಲಿ ಜೀವನ ಮಾಡುತ್ತಿದ್ದಾರೆ. ಅನಾರೋಗ್ಯಕರ ವಾತಾವರಣದಲ್ಲಿ ಬದುಕು ಸಾಗಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾನಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಬದ್ದ ಹಕ್ಕುಗಳಿಂದ ವಂಚಿತರಾದ ಈ ಜನತೆಗೆ ಸರ್ಕಾರಿ ಯೋಜನೆಯಡಿ ಕೂಡಲೇ ಶೌಚಾಲಯ ನಿರ್ಮಿಸಿಕೊಡಬೇಕು. ಕುಡಿವ ನೀರು ಸರಬರಾಜು, ನಿಯಮಿತವಾಗಿ ಮಾಡಲು ಸೂಕ್ರ ಕ್ರಮ ಕೈಗೊಳ್ಳಬೇಕು. ಪೈಪ್‌ಲೈನ್‌ ಅಳವಡಿಸಿ ನೀರು ಸರಬರಾಜು ಮಾಡಬೇಕು. ಕೆಟ್ಟು ಹಾಳಾಗಿ ಹೋಗಿರುವ, ನೀರು ಹರಿಯದಂತಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿರುವ ಒಳಚರಂಡಿಗಳನ್ನು ದುರಸ್ತಿ ಮಾಡಿ, ಪುನಃ ನಿರ್ಮಿಸಿಕೊಡಬೇಕು. ಬಡಾವಣೆಯಲ್ಲಿ ರಸ್ತೆಯೇ ಇಲ್ಲ, ಆದ್ದರಿಂದ ರಸ್ತೆ ನಿರ್ಮಿಸಿಕೊಡಬೇಕು. ಬೀದಿ ದೀಪಗಳನ್ನು ಅಳವಡಿಸಿಕೊಡಬೇಕು. ಕಳೆದ 10-15 ವರ್ಷಗಳಿಂದ ವಿನಾಃ ಕಾರಣ ಕಟ್ಟಿಸಿಕೊಳ್ಳದ ಮನೆ ತೆರಿಗೆಯನ್ನು ಈಗಿನಿಂದಲೇ ಕಟ್ಟಿಸಿಕೊಳ್ಳಬೇಕು. ಜತೆಗೆ ಸೂಕ್ತ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದವರು ಒತ್ತಾಯಿಸಿದ್ದಾರೆ. ಬಳಿಕ ಜಿಪಂ ಸಿಇಒ ಕೆ.ನಿತೀಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಾಳಗಡ್ಡ ನಿವಾಸಿಗಳ ಹೋರಾಟ ಸಮಿತಿಯ ಶ್ರೀಧರಗಡ್ಡೆ ಸಂಚಾಲಕ ಇ.ಹನುಮಂತಪ್ಪ, ಆರ್‌. ಸೋಮಶೇಖರ್‌ಗೌಡ, ಎ.ದೇವದಾಸ್‌, ಎನ್‌.ಬಿ.ಬಾಬು ಹಾಗೂ ಸದಸ್ಯರಾದ ಚೆನ್ನಬಸಪ್ಪ, ಸುಂಕಪ್ಪ, ಈರಮ್ಮ, ಸಣ್ಣ ಹನುಮಪ್ಪ, ಪಂಪಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next