Advertisement

UPA ಸರ್ಕಾರದ ಮೇಲೆ ಗೂಬೆ ಕೂರಿಸೋದನ್ನು ನಿಲ್ಲಿಸಿ; BJPಗೆ ಸಿನ್ನಾ

03:07 PM Sep 28, 2017 | Team Udayavani |

ನವದೆಹಲಿ:ನಾನೀಗ ಮಾತನಾಡದಿದ್ದರೆ ಅದು ದೇಶಕ್ಕ ದ್ರೋಹ ಮಾಡಿದಂತೆ, ಹೀಗಾಗಿ ಹಣಕಾಸು ಸಚಿವರು ಸೃಷ್ಟಿಸಿರುವ ಆರ್ಥಿಕತೆಯ ಅವ್ಯವಸ್ಥೆ ಬಗ್ಗೆ ನಾನೀಗ ಮಾತನಾಡಲೇಬೇಕಿದೆ ಎಂದು ಬಿಜೆಪಿ ಹಿರಿಯ ನಾಯಕ, ಹಣಕಾಸು ಮಾಜಿ ಸಚಿವ ಯಶವಂತ ಸಿನ್ನಾ ನೀಡಿದ್ದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿತ್ತು. ಆದರೆ ನನ್ನ ವಿಶ್ಲೇಷಣೆಗೆ ತಾನು ಬದ್ಧನಾಗಿದ್ದೇನೆ ಎಂದು ಸಿನ್ನಾ ಗುರುವಾರ ಪುನರುಚ್ಚರಿಸಿದ್ದಾರೆ.

Advertisement

ಯಶವಂತ್‌ ಸಿನ್ಹಾ ಅವರು ಪ್ರಮುಖ ರಾಷ್ಟ್ರೀಯ ದೈನಿಕವೊಂದರಲ್ಲಿ ಬರೆದಿದ್ದ ಲೇಖನದಲ್ಲಿ  ದೇಶದ ಆರ್ಥಿಕತೆಯನ್ನು ಚಿಂದಿ ಮಾಡಿರುವ ವಿತ್ತ ಸಚಿವ ಅರುಣ್‌ ಜೇತ್ಲಿ ವಿರುದ್ಧ ಕಟು ಟೀಕಾ ಪ್ರಹಾರ ಮಾಡಿದ್ದರಲ್ಲದೆ, “ಈಗಿನ ಸುಧಾರಣಾ ಪ್ರಕ್ರಿಯೆಗಳಿಂದ ಹಿಂದೆ ಸರಿಯಬೇಕು ಮತ್ತು ಉದ್ಯೋಗ ಸೃಷ್ಟಿಸದ ಅಭಿವೃದ್ಧಿ ಕಾರ್ಯಗಳಿಗೆ ವಿಪರೀತ ಒತ್ತು ಕೊಡುವುದನ್ನು ನಿಲ್ಲಿಸಬೇಕು’ ಎಂದು ಪ್ರಧಾನಿ ಮೋದಿಯನ್ನು ಆಗ್ರಹಿಸಿದ್ದರು.  

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ ನಿರ್ಧಾರಗಳಿಂದಾಗಿ ದೇಶದ ಆರ್ಥಿಕತೆ ಹಳ್ಳಹಿಡಿಯುವಂತಾಗಿದೆ. ಆದರೆ ನಾವು ಯುಪಿಎ(ಹಿಂದಿನ ಸರ್ಕಾರ) ನೀತಿ ಕುರಿತು ಆರೋಪಿಸುತ್ತಿದ್ದೇವೆ ಎಂದು ಎಎನ್ಐ ಜತೆ ಮಾತನಾಡುತ್ತ ತಿರುಗೇಟು ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next