Advertisement

ರಾಜ್ಯ ಆಹಾರ ನಿಗಮ ಅಧ್ಯಕ್ಷರ ಭೇಟಿ

09:01 AM Jun 17, 2020 | Suhan S |

ಅಜ್ಜಂಪುರ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ “ಪಡಿತರ ವಿತರಣಾ ಘಟಕ’ಕ್ಕೆ ರಾಜ್ಯ ಆಹಾರ ನಿಗಮದ ಅಧ್ಯಕ್ಷ ಕೃಷ್ಣಮೂರ್ತಿ ಮಂಗಳವಾರ ಭೇಟಿ ನೀಡಿದರು.

Advertisement

ಪಡಿತರ, ಪಡಿತರ ಗುಣಮಟ್ಟ, ದಾಸ್ತಾನು, ವಿತರಣೆ, ಅಳತೆ ಮಾಪನಗಳ ತಪಾಸಣೆ ನಡೆಸಿದ್ದೇವೆ. ಯಾವುದೇ ಲೋಪ-ದೋಷಗಳು ಕಂಡು ಬಂದಿಲ್ಲ. ಪಡಿತರ ಚೀಟಿ ರಹಿತ ಕುಟುಂಬಕ್ಕೆ ತಲಾ 5 ಕೆಜಿ ಅಕ್ಕಿ ಮತ್ತು 2 ಕೆಜಿ ಕಡ್ಲೆಕಾಳು ವಿತರಿಸಲು ಸೂಚಿಸಿದ್ದೇವೆ ಎಂದು ನಿಗಮ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.

ನಿಗಮದ ಸದಸ್ಯ ಶಿವಶಂಕರ್‌, ಮಹಮದ್‌ ಆಲಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್‌, ಗುಣಮಟ್ಟ ಪರೀಕ್ಷಕ ಮಹೇಂದ್ರ, ಜಿಲ್ಲಾ ತಾಂತ್ರಿಕ ಸಹಾಯಕ ಸತೀಶ್‌, ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ, ಆಹಾರ ನಿರೀಕ್ಷಕ ಶ್ರೀನಿವಾಸ್‌, ಶಿರಸ್ತೇದಾರ ಮಲ್ಲಪ್ಪ, ವಿ ಎಸ್‌ ಎಸ್‌ ಎನ್‌ ಅಧ್ಯಕ್ಷ ಸಿದ್ರಾಮಪ್ಪ, ಕಾರ್ಯದರ್ಶಿ ಬಿ.ಟಿ. ತಿಪ್ಪೇಶ್‌, ಸತೀಶ್‌ ಮತ್ತಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next