Advertisement

State ಚುನಾವಣ ಆಯುಕ್ತ ಸಂಗ್ರೇಶಿ ಅಧಿಕಾರ ಸ್ವೀಕಾರ

11:42 PM Jul 26, 2024 | Team Udayavani |

ಬೆಂಗಳೂರು: ರಾಜ್ಯ ಚುನಾವಣ ಆಯೋಗದ ಆಯುಕ್ತರಾಗಿ ಜಿ.ಎಸ್‌. ಸಂಗ್ರೇಶಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

3 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿ.ಪಂ. ಹಾಗೂ ತಾ.ಪಂ.ಚುನಾವಣೆ ನಡೆಸುವುದು ನೂತನ ಆಯುಕ್ತರ ಮುಂದಿರುವ ತತ್‌ಕ್ಷಣದ ಸವಾಲು ಆಗಿದೆ. ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಸಂಗ್ರೇಶಿ ಅವರನ್ನು ಜೂ. 28ರಂದು ರಾಜ್ಯ ಚುನಾವಣ ಆಯುಕ್ತರನ್ನಾಗಿ ನೇಮಕ ಮಾಡಿತ್ತು.

ಈ ಹಿಂದೆ ರಾಜ್ಯಚುನಾವಣ ಆಯುಕ್ತರಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಡಾ| ಬಿ.ಬಸವ ರಾಜು ಅವರ ಅವಧಿ ಜೂನ್‌ 23ಕ್ಕೆ ಕೊನೆಗೊಂಡಿತ್ತು. ಆ ಸ್ಥಾನಕ್ಕೆ ಸರಕಾರ ಸಂಗ್ರೇಶಿ ಅವರನ್ನು ನೇಮಕ ಮಾಡಿತ್ತು.

ಕಾನೂನು ಇಲಾಖೆಯ ಪ್ರಧಾನ ಕಾರ್ಯ ದರ್ಶಿಯಾಗಿ ಕಾರ್ಯ ನಿರ್ವಹಿಸುವುದಕ್ಕಿಂತ ಮುಂಚೆ ಅವರು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next