Advertisement

ಫೆಬ್ರವರಿ ಎರಡನೇ ವಾರದಲ್ಲಿ ರಾಜ್ಯ ಬಜೆಟ್‌

09:10 AM Dec 13, 2017 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ ಎರಡನೇ ವಾರದಲ್ಲಿ 2017-18 ನೇ ಸಾಲಿನ ಬಜೆಟ್‌ ಮಂಡಿಸಲು ತೀರ್ಮಾನಿಸಿದ್ದು, ಬಜೆಟ್‌ ಗಾತ್ರ 2 ಲಕ್ಷ ಕೋಟಿ ರೂ. ಮುಟ್ಟಲಿದೆ.

Advertisement

ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಆರಂಭಿಸಿರುವ ಒಂದು ತಿಂಗಳ ಯಾತ್ರೆ ಬಳಿಕ ಸಂಕ್ರಾಂತಿ ನಂತರ ಇಲಾಖಾವಾರು ಹಾಗೂ ಸಂಘ-ಸಂಸ್ಥೆಗಳ ಜತೆ ಬಜೆಟ್‌ ಪೂರ್ವಭಾವಿ ಸಮಾಲೋಚನೆ ಆರಂಭಿಸಲಿರುವ ಸಿದ್ದರಾಮಯ್ಯ ಅವರು, ಫೆಬ್ರವರಿ 2ನೇ
ವಾರದಲ್ಲಿ ಬಜೆಟ್‌ ಮಂಡಿಸಲಿದ್ದಾರೆ. ವರ್ಷದ ಮೊದಲ ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನ ಒಂದೇ ತಿಂಗಳಲ್ಲಿ ಮಾಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಬಜೆಟ್‌ ನಂತರ ಮಾರ್ಚ್‌ 1 ರಿಂದ ಪಕ್ಷದ ನಾಯಕರ ಸಮೇತ ವಿಶೇಷ ಬಸ್‌ನಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲು
ತೀರ್ಮಾನಿಸಿದ್ದಾರೆ. ಮೊದಲ ಹಂತದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಯಾತ್ರೆ, ಪಕ್ಷದ ವತಿಯಿಂದ
ಸಂಘಟನಾ ಯಾತ್ರೆ ನಡೆಸಿ ಎರಡನೇ ಹಂತದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿದರೆ ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು  ಹಾಗೂ ಮುಖಂಡರನ್ನು ಸಕ್ರಿಯವಾಗಿ ಚಟುವಟಿಕೆಗಳಿಂದ ಇರಿಸಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next