Advertisement

ಬಂಟ್ವಾಳ ತಹಶೀಲ್ದಾರ್‌ಗೆ ರಾಜ್ಯ ಪ್ರಶಸ್ತಿ

01:14 AM Jan 26, 2022 | Team Udayavani |

ಬಂಟ್ವಾಳ: ಸಹಾಯಕ ಚುನಾವಣ ನೋಂದಣಿ ಅಧಿಕಾರಿ (ಎಇಆರ್‌ಒ)ಯೂ ಆಗಿರುವ ಇಲ್ಲಿನ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಅವರು ಚುನಾವಣಾ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದಕ್ಕಾಗಿ 2021-22ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಮಂಗಳವಾರ ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋಟ್‌ ನೇತೃತ್ವದ ವರ್ಚುವಲ್‌ ಸಮಾರಂಭದಲ್ಲಿ ಅವರು ದ.ಕ. ಜಿ.ಪಂ. ಸಭಾಂಗಣ ದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಸಾಂಕೇತಿಕವಾಗಿ ಪ್ರಶಸ್ತಿ ನೀಡಿದರು.

ಇದನ್ನೂ ಓದಿ:ನಾಗರಹೊಳೆಯಲ್ಲಿ ಮೊದಲ ಹಂತದ ಗಣತಿ ಮುಕ್ತಾಯ: ಮಲ,ಹಿಕ್ಕೆ, ಲದ್ದಿ ಸಂಗ್ರಹ, ಆ್ಯಪ್ ಮೂಲಕ ದಾಖಲು

2011ರಿಂದ ರಾಷ್ಟ್ರೀಯ ಮತದಾರರ ದಿನದಂದು ಈ ಪ್ರಶಸ್ತಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ರಾಜ್ಯಪಾಲರೇ ನೀಡಬೇಕಿತ್ತಾದರೂ ಕೋವಿಡ್‌ ಕಾರಣಕ್ಕೆ ವರ್ಚುವಲ್‌ ಸಮಾರಂಭ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next