Advertisement

ಶಾಲೆ ಆರಂಭ:ಕೊಠಡಿಯಲ್ಲಿ 15-20ವಿದ್ಯಾರ್ಥಿಗಳು

02:58 PM Aug 18, 2021 | Team Udayavani |

ಮಂಡ್ಯ: ಕೊರೊನಾ ಸೋಂಕಿನ 3ನೇ ಅಲೆಯಭೀತಿಯ ನಡುವೆಯೂ ರಾಜ್ಯಾದ್ಯಂತ 9 ಮತ್ತು10ನೇ ತರಗತಿ ಮಕ್ಕಳಿಗೆ ಆ.23ರಿಂದ ಭೌತಿಕ ಶಾಲೆಆರಂಭಿಸಲು ಸರ್ಕಾರ ಸೂಚಿಸಿದ್ದು, ಅದರಂತೆಜಿಲ್ಲೆಯಲ್ಲಿಯೂ ಶಾಲೆಗಳನ್ನು ತೆರೆಯಲು ಎಲ್ಲರೀತಿಯ ಕೋವಿಡ್‌ ಮುಂಜಾಗ್ರತೆ ಕ್ರಮ ಕೈಗೊಳ್ಳಲುಸಾರ್ವಜನಿಕ ಶಿಕ್ಷಣ ಇಲಾಖೆ ಸಜಾjಗಿದೆ.

Advertisement

ಅಗತ್ಯ ಸಿದ್ಧತೆ: ಜಿಲ್ಲೆಯಲ್ಲಿ ಎಲ್ಲ ಪ್ರೌಢಶಾಲೆಗಳಿಗೆ ಸೂಚನೆ ನೀಡಲಾಗಿದ್ದು,ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲೆಗಳ ಆವರಣದಲ್ಲಿಸ್ವತ್ಛತೆ, ಸ್ಯಾನಿಟೈಸರ್‌, ಶೌಚಾಲಯ,ಬಿಸಿ ನೀರಿನ ವ್ಯವಸ್ಥೆ, ಥರ್ಮಲ್‌ಸ್ಕಾ Âನಿಂಗ್‌, ಕಡ್ಡಾಯ ಮಾಸ್ಕ್,ಸಾಮಾಜಿಕ ಅಂತರ ಕಾಪಾಡಿಕೊಳ್ಳಲುಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

454 ಪ್ರೌಢ ಶಾಲೆಗಳು: ಜಿಲ್ಲೆಯಲ್ಲಿ ಒಟ್ಟು 454ಪ್ರೌಢ ಶಾಲೆಗಳಿವೆ. ಇದರಲ್ಲಿ 213 ಸರ್ಕಾರಿ, 26ಬಿಸಿಎಂ, 97 ಅನುದಾನಿತ ಹಾಗೂ 118 ಅನುದಾನರಹಿತ ಶಾಲೆಗಳಿವೆ. ಎಲ್ಲ ಶಾಲೆಗಳಲ್ಲೂ ಅಗತ್ಯ ಸಿದ್ಧತೆಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಸೂಚಿಸಿದ್ದು, ಮುಂಜಾಗ್ರತೆ ಕ್ರಮಗಳುಆರಂಭಗೊಂಡಿವೆ.42,938 ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 9 ಮತ್ತು10ನೇ ತರಗತಿಗೆ ಒಟ್ಟು 42,938 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದರಲ್ಲಿ 21,941ವಿದ್ಯಾರ್ಥಿಗಳು 9ನೇ ತರಗತಿಗೆ ದಾಖಲಾಗಿದ್ದರೆ,20,997 ವಿದ್ಯಾರ್ಥಿಗಳು 10ನೇ ತರಗತಿಗೆನೋಂದಣಿಯಾಗಿದ್ದಾರೆ.

ಒಂದು ಕೊಠಡಿಗೆ 15 ವಿದ್ಯಾರ್ಥಿಗಳು:ತರಗತಿಯಲ್ಲಿ ದೈಹಿಕ ಅಂತರ ಕಾಪಾಡುವದೃಷ್ಟಿಯಿಂದ ಒಂದು ಕೊಠಡಿಯಲ್ಲಿ 15ರಿಂದ 20ಮಂದಿವಿದ್ಯಾರ್ಥಿಗಳಿಗೆಅವಕಾಶನೀಡಲಾಗುವುದು.ಅದಕ್ಕಾಗಿ ಶಿಕ್ಷಕರು 15 ಹಾಗೂ 20 ಮಂದಿವಿದ್ಯಾರ್ಥಿಗಳ ರಚನೆ ಮಾಡಿಕೊಂಡು ಕೊಠಡಿಗಳಅಗತ್ಯಗನುಗುಣವಾಗಿ ತರಗತಿ ನಡೆಸಲು ಸಿದ್ಧತೆಮಾಡಿಕೊಳ್ಳಲಾಗುತ್ತಿದೆ.ಶೇ.0.34 ಪಾಸಿಟಿವಿಟಿ ದರ: ಜಿಲ್ಲೆಯಲ್ಲಿ ಪ್ರಸ್ತುತಕೋವಿಡ್‌ ಸೋಂಕಿತರ ಪಾಸಿಟಿವಿಟಿ ದರ ಶೇ.0.34ಇದ್ದು, ಸದ್ಯ ಕೊರೊನಾ ನಿಯಂತ್ರಣದಲ್ಲಿದೆ.ಬೆರಳೆಣಿಕೆ ಮಂದಿ ಮಕ್ಕಳಿಗೆ ಜ್ವರ, ನೆಗಡಿಯಂಥಲಕ್ಷಣಗಳು ಕಂಡು ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ.

ಪೋಷಕರಿಗೆ ಮಾಹಿತಿ: ಶಾಲೆ ತೆರೆಯುವ ಬಗ್ಗೆಈಗಾಗಲೇ ಪೋಷಕರಿಗ ೆ ಮಾಹಿತಿ ನೀಡಲಾಗು ತ್ತಿದೆ.ಪ್ರಸ್ತುತ ಆನ್‌ಲೈನ್‌ ತರಗತಿ ನಡೆಯುತ್ತಿರುವುದರಿಂದ ಪೋಷಕರ ಅಭಿಪ್ರಾಯ ಕೇÙ ‌ಲಾಗುತ್ತಿದೆ. ಅಲ್ಲದೆ, ಶಿಕ್ಷಕರು ಖುದ್ದಾಗಿ ಮ® ೆಗ ‌ಳಿಗ ೆಭೇಟಿ ನೀಡಿ ಪೋಷಕರಿಗೆ ಮಕ ‌ Rಳನು ° ಶಾಲೆಗೆಕಳುಹಿಸುವ ಬಗ್ಗೆ ಹಾಗೂ ಶಾಲೆಯಲ್ಲಿ ಕೈಗೊಂಡಿರುವ ಕ ೋವಿಡ್‌ ಮುಂಜಾಗ್ರತೆ ಬಗ್ಗೆ ಅರಿವುಮೂಡಿಸಲಾಗುತ್ತಿದೆ.ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಪೋಷಕರೇನಿರ್ಧಾರ ಮಾಡಬಹುದಾಗಿದ್ದು, ಮನೆಯಲ್ಲಿಯೇಆನ್‌ಲೈನ್‌ ಕ್ಲಾಸ್‌, ಟಿವಿಯಲ್ಲಿ ಪ್ರಸಾರವಾಗುವತರಗತಿಗಳ ಅಭ್ಯಾಸ ಮಾಡಿಸುತ್ತೇವೆ ಎಂದುಮನೆಯಲ್ಲಿಯೇ ಉಳಿಸಿಕೊಂಡರೆ ಅಂಥವರುಶಾಲೆಗೆಕಳುಹಿಸುವ ಅವಶ್ಯಕತೆ ಇರುವುದಿಲ್ಲ.

Advertisement

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next