Advertisement

ತುರ್ತು ಪರಿಸ್ಥಿತಿ ವಿರೋಧಿಸಿದ್ದಕ್ಕೆ ಡಿಎಂಕೆ ಸರ್ಕಾರ ವಜಾ: ಸ್ಟಾಲಿನ್‌

10:40 PM Mar 11, 2023 | Team Udayavani |

ಕೊಯಮತ್ತೂರು: ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರಿಂದ 1975ರಲ್ಲಿ ದಿ. ಎಂ.ಕರುಣಾನಿಧಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಲಾಯಿತು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ.

Advertisement

ಕೊಯಮತ್ತೂರಿನಲ್ಲಿ ಎಐಎಡಿಎಂಕೆ, ಡಿಎಂಕೆ ಸೇರಿದಂತೆ 4,000ಕ್ಕೂ ಹೆಚ್ಚು ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ತುರ್ತು ಪರಿಸ್ಥಿತಿಯನ್ನು ವಿರೋಧಿಸದಂತೆ ದಿ. ಇಂದಿರಾ ಗಾಂಧಿ ಕರುಣಾನಿಧಿ ಅವರಿಗೆ ಸೂಚಿಸಿದ್ದರು. ಆದರೆ ಪ್ರಜಾಪ್ರಭುತ್ವ ವಿರೋಧಿಯಾದ ಹೇರಿಕೆಯನ್ನು ವಿರೋಧಿಸಿದರು. ಇದರಿಂದ ಸರ್ಕಾರ ಉರುಳಿತು,’ ಎಂದರು.

“ಕರುಣಾನಿಧಿ ಅವರು ಸದಾ ಪ್ರಜಾಪ್ರಭುತ್ವದ ಪರವಾಗಿ ಇದ್ದರು. ಅಧಿಕಾರಕ್ಕಾಗಿ ಎಂದೂ ಜನ ವಿರೋಧಿ ನೀತಿಗಳನ್ನು ಬೆಂಬಲಿಸಲಿಲ್ಲ. “ನನ್ನ ಪ್ರಾಣ ಹೋದರೂ ಪರವಾಗಿಲ್ಲ. ಪ್ರಜಾಪ್ರಭುತ್ವ ಉಳಿಯುವುದು ನನಗೆ ಮುಖ್ಯ’ ಎಂದು ಅವರು ಹೇಳಿದ್ದರು,’ ಎಂದು ಪುತ್ರ ಸ್ಟಾಲಿನ್‌ ಸ್ಮರಿಸಿದರು. 2024ರ ಚುನಾವಣೆಗೆ ಪ್ರತಿಪಕ್ಷಗಳ ಒಕ್ಕೂಟ ರಚನೆಯ ಪ್ರಯತ್ನಗಳು ನಡೆದಿರುವಂತೆಯೇ ಸ್ಟಾಲಿನ್‌ ಅವರಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next