Advertisement

ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನಾ ಮಹೋತ್ಸವ

02:58 PM Jan 06, 2022 | Team Udayavani |

ದಾವಣಗೆರೆ: ಇಲ್ಲಿನ ಪಿ.ಜೆ. ಬಡಾವಣೆಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನಾ ಮಹೋತ್ಸವ ನೆರವೇರಿಸಲಾಯಿತು.

Advertisement

ಪ್ರಾತಃಸ್ಮರಣೀಯ, ಯತಿಕುಲ ಚಕ್ರವರ್ತಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನಾ ಮಹೋತ್ಸವದ ಅಂಗವಾಗಿ ಅಷ್ಟೋತ್ತರ ಸೇವೆ ಹಾಗೂ ವಿದ್ವಾನ್‌ ಡಾ| ವೆಂಕಟಗಿರೀಶಾಚಾರ್‌ ಅವರಿಂದ ಉಪನ್ಯಾಸ ನಡೆಯಿತು.

ಜಯತೀರ್ಥಾಚಾರ್‌ ಒಡೆಯರ್‌, ಪ್ರಕಾಶ್‌ ಪಾಟೀಲ್‌, ಕಂಪ್ಲಿ ಗುರುರಾಜಾಚಾರ್‌, ಶ್ಯಾಮ ಘಟಿಕಾರ್‌,ರಮೇಶ್‌ ನಾಡಿಗೇರ್‌, ಸುಬ್ಬಣ್ಣ ಆಚಾರ್‌ ಒಡೆಯರ್‌, ಕೆ. ಎಸ್‌. ಎಫ್‌. ಸಿ. ನಾಗರಾಜ್‌, ರಾಜಣ್ಣ, ಅಡುಗೆ ರಂಗಣ್ಣ, ವಿಶ್ವ ಮಾಧ್ವ ಪರಿಷತ್‌ ಪದಾಧಿಕಾರಿಗಳು, ಭಕ್ತ ವೃಂದದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next