Advertisement

ದ್ವೇಷದ ವಿಷಬೀಜ ಬಿತ್ತುತ್ತಿರುವ ಬುದ್ಧಿಜೀವಿಗಳು

06:00 AM Apr 02, 2018 | Team Udayavani |

ಬೆಂಗಳೂರು: ಕೆಲ ಬುದ್ಧಿಜೀವಿಗಳು ಸಮಾಜದಲ್ಲಿ ಬ್ರಾಹ್ಮಣರು ಮತ್ತು ಇತರ ಸಮುದಾಯಗಳ ನಡುವೆ ದ್ವೇಷದ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆರೋಪಿಸಿದರು.

Advertisement

ನಗರದ ವಯ್ನಾಲಿ ಕಾವಲ್‌ನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನ ಆವರಣದಲ್ಲಿ ಭಾನುವಾರ ಮಲ್ಲೇಶ್ವರ ಬ್ರಾಹ್ಮಣ ಮಹಾಸಭಾ ಪುರಂದರದಾಸ ಮತ್ತು ತ್ಯಾಗರಾಜರ ಆರಾಧನೆ ಹಾಗೂ ಕನಕದಾಸ ಜಯಂತಿ ಮತ್ತು ವಾಗ್ಗೇಯಕಾರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ವಿಪ್ರಶಕ್ತಿ-ಮಹಾಶಕ್ತಿ’ಯಲ್ಲಿ ಸಾನ್ನಿಧ್ಯ ವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣರ ಬಗ್ಗೆ ಇತರರಿಗೆ ಯಾವುದೇ ದ್ವೇಷ ಇಲ್ಲ. ಆದರೆ, ಕೆಲ ಬುದ್ಧಿಜೀವಿಗಳು ಬ್ರಾಹ್ಮಣರು ಮತ್ತು ಉಳಿದವರ ನಡುವೆ ದ್ವೇಷದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ವಾಸ್ತವವಾಗಿ ಅಸ್ಪೃಶ್ಯತೆ ನಿರ್ಮೂಲನೆ ಸೇರಿದಂತೆ ಇಡೀ ಸಮಗ್ರ ಸಮಾಜದ ಲೋಕಕಲ್ಯಾಣಕ್ಕಾಗಿ ಶ್ರಮಿಸಿದವರು ಬ್ರಾಹ್ಮಣರು. ವಿಚಿತ್ರವೆಂದರೆ ಇಂದು ಸಮಾಜದ ಯಾವುದೇ ಅಹಿತಕರ ಘಟನೆಗಳಿಗೆ ಬ್ರಾಹ್ಮಣರನ್ನು ಹೊಣೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಜಾತಿ-ಮತಗಳ ಕಲಹದಿಂದ ಹೊರತಾಗಿ ಎಲ್ಲರ ಕಲ್ಯಾಣಕ್ಕೆ ಬ್ರಾಹ್ಮಣರು ಕಟಿಬದ್ಧರಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆ ಅಗತ್ಯ ಎಂದು ಕರೆ ನೀಡಿದರು.

ಚುನಾವಣೆಯಲ್ಲಿ ಬ್ರಾಹ್ಮಣರಿಗೆ ಟಿಕೆಟ್‌ ನೀಡುವ ಬಗ್ಗೆ ಪ್ರಶ್ನಿಸಿದಾಗ, “ಇದನ್ನು ನೀವೇ (ರಾಜಕೀಯ ಪಕ್ಷಗಳು) ತೀರ್ಮಾನಿಸಿ. ಯಾರಿಗೆ ಟಿಕೆಟ್‌ ನೀಡಿದರೆ ಸೂಕ್ತ ಎಂಬುದನ್ನು ಅವಲೋಕಿಸಿ. ಬ್ರಾಹ್ಮಣರಿಗೂ ಸೇರಿದಂತೆ ಯಾರಿಗೂ ಅನ್ಯಾಯ ಆಗಬಾರದು. ಹಾಗಂತಾ, ಇಂತಹ ವ್ಯಕ್ತಿಗೇ ಟಿಕೆಟ್‌ ನೀಡಬೇಕು ಎಂದು ನಾನು ಹೇಳುವುದಿಲ್ಲ. ಸೂಕ್ತ ವ್ಯಕ್ತಿಗೆ ಆದ್ಯತೆ ಕೊಡಿ ಎಂದು ತಿಳಿಸಿದರು.

“ಹಿಂದೂ ನಿರಾಕರಿಸುವ ಅಧಿಕಾರ ಇಲ್ಲ’
ವೀರಶೈವ ಮತ್ತು ಲಿಂಗಾಯತರು ಇಬ್ಬರೂ ಒಂದೇ ಹಾಗೂ ಇವೆರಡೂ ಹಿಂದೂ ಧರ್ಮದ ಭಾಗವೇ ಆಗಿವೆ. ತಾವು ಹಿಂದೂಗಳಲ್ಲ ಎಂದು ಹೇಳಲು ಇಬ್ಬರಿಗೂ ಯಾವುದೇ ಅಧಿಕಾರ ಇಲ್ಲ ಎಂದು ಪೇಜಾವರಶ್ರೀ ಸ್ಪಷ್ಟಪಡಿಸಿದರು.

Advertisement

ಲಿಂಗಾಯತರು ಇಷ್ಟಲಿಂಗ ಪೂಜೆ ಮಾಡುತ್ತಾರೆ. ಆ ಇಷ್ಟಲಿಂಗವೂ ಶಿವನ ಪ್ರತಿಮೆಯಾಗಿದೆ. ಆ ಶಿವ ಹಿಂದೂಗಳ ಆರಾಧ್ಯದೈವ. ಹಾಗಾಗಿ, ತಾವು ಹಿಂದೂಗಳಲ್ಲ ಎಂದು ಹೇಳಿಕೊಳ್ಳುವ ಅಧಿಕಾರವೇ ಲಿಂಗಾಯತರಿಗೆ ಇಲ್ಲ. ಅಲ್ಲದೆ, ವೈದಿಕರಲ್ಲಿ ವಿವಿಧ ಪಂಥಗಳಿದ್ದರೂ ಅವರೆಲ್ಲರೂ ಬ್ರಾಹ್ಮಣರಾಗಿದ್ದಾರೆ. ಅದೇ ರೀತಿ, ಲಿಂಗಾಯತ-ವೀರಶೈವರಲ್ಲಿ ಆಚರಣೆಗಳು ಬೇರೆ ಬೇರೆ ಆಗಿದ್ದರೂ ಅವೆರಡೂ ಒಂದೇ ಹಾಗೂ ಹಿಂದೂಗಳೇ ಎಂದು ಪುನರುತ್ಛರಿಸಿದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಮತ್ತು ಬ್ರಾಹ್ಮರು ಒಟ್ಟಾಗಬೇಕು. ಈ “ಮುಷ್ಠಿ’ (ಒಗ್ಗಟ್ಟು) ಮತ್ತೂಬ್ಬರನ್ನು ಹಣಿಯಲು ಅಲ್ಲ. ಸನಾತನ ಧರ್ಮ ರಕ್ಷಣೆಗೆ. ದ್ವೆ„ತ, ಅದ್ವೆ„ತ ಮತ್ತು ವಿಶಿಷ್ಟಾದ್ವೆ„ತ ಎಂದು ಬೇರೆ ಬೇರೆ ಮತಗಳಿರಬಹುದು. ಆದರೆ, ಅವೆಲ್ಲವುಗಳಿಗೂ ಮೂಲ ಒಂದೇ. ಹಿಂದೂ ಎಂಬ ಮಹಾಗೋಡೆ ಕುಸಿಯದಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದರು.

ಮಲ್ಲೇಶ್ವರದಲ್ಲಿ ಡಾ.ಅಶ್ವತ್ಥನಾರಾಯಣ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಕ್ಷೇತ್ರದಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಆ ಸಮುದಾಯದವರಿಗೂ ಅವಕಾಶ ನೀಡಬೇಕು.
– ಬಿಜೆಪಿ ಟಿಕೆಟ್‌ ಆಕಾಂಕ್ಷಿ ಪ್ರಕಾಶ್‌ ಅಯ್ಯಂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next