Advertisement

ಶ್ರೀ ರಾಧಾಕೃಷ್ಣ  ಭಜನ ಮಂಡಳಿ: ವಜ್ರ ಮಹೋತ್ಸವ –ಸಮ್ಮಾನ

04:06 PM Feb 21, 2019 | Team Udayavani |

ಡೊಂಬಿವಲಿ: ಡೊಂಬಿ ವಲಿಯ ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ವಜ್ರ ಮಹೋತ್ಸವದ ಸಮಾರೋಪ ಸಮಾರಂಭವು ಫೆ. 17ರಂದು ಸಂಜೆ ಡೊಂಬಿವಲಿ ಪೂರ್ವದ ಶ್ರೀ ವರದ ಸಿದ್ಧಿವಿನಾಯಕ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಮಂಡಳಿಯ ಶ್ರೇಯೋಭಿವೃದ್ಧಿಗೆ  ನಿರಂತರವಾಗಿ ಶ್ರಮಿಸುತ್ತಿರುವ ಎಸ್‌. ಟಿ. ವಿಜಯಕುಮಾರ್‌, ರವಿ ಸನಿಲ್‌ ದಂಪತಿ, ಸೋಮನಾಥ ಪೂಜಾರಿ, ಶೇಖರ್‌ ಪುತ್ರನ್‌, ಶೇಖರ ಕೋಟ್ಯಾನ್‌, ಅಶೋಕ್‌ ಪ್ರಸಾದ್‌, ರಾಜೇಶ್‌ ಕೋಟ್ಯಾನ್‌, ಪ್ರಧಾನ ಅರ್ಚಕ  ಪ್ರಕಾಶ್‌ ಭಟ್‌ ದಂಪತಿ, ಯು. ಲಕ್ಷ್ಮಣ್‌ ಸುವರ್ಣ, ಆನಂದ್‌ ಪುತ್ರನ್‌, ಜಗದೀಶ್‌ ನಿಟ್ಟೆ, ಗಂಗಾಧರ ಕಾಂಚನ್‌, ಪುರಂದರ ಕೋಟ್ಯಾನ್‌, ಸುಕುಮಾರ್‌ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ರಾಜೀವ ಭಂಡಾರಿ, ಆನಂದ ಶೆಟ್ಟಿ ಎಕ್ಕಾರು, ವಸಂತ ಸುವರ್ಣ, ಮಹಿಳಾ ವಿಭಾಗದ ಸದಸ್ಯೆಯರನ್ನು ಗೌರವಿಸಲಾಯಿತು.

ಡೊಂಬಿವಲಿ ಕರ್ನಾಟಕ ಸಂಘದ  ಅಧ್ಯಕ್ಷ ಹಾಗೂ ಶ್ರೀ ರಾಧಾಕೃಷ್ಣ ಹಾಗೂ ಶ್ರೀ ಶನೀಶ್ವರ ಮಂದಿರದ ವಜ್ರ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ  ಅತಿಥಿಗಳಾದ ಕಲ್ಯಾಣ್‌-ಡೊಂಬಿವಲಿ ಮಹಾನಗರ ಪಾಲಿಕೆಯ ಮೇಯರ್‌ ವಿನೀತಾ ವಿ. ರಾಣೆ, ಕಲ್ಯಾಣ್‌-ಡೊಂಬಿವಲಿ ಮಹಾನಗರ ಪಾಲಿಕೆಯ ಸದಸ್ಯ ವಿಶ್ವನಾಥ ರಾಣೆ, ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿÅà ಇದರ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ, ಸುಬ್ಬಯ್ಯ ಶೆಟ್ಟಿ, ಕರ್ನಾಟಕ ಸಂಘ ಡೊಂಬಿವಲಿ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು ರಾಜೀವ ಭಂಡಾರಿ, ಸೋಮನಾಥ ಪೂಜಾರಿ, ಶೇಖರ ಕೋಟ್ಯಾನ್‌, ಶೇಖರ ಪುತ್ರನ್‌ ಮೊದಲಾದವರು ಉಪಸ್ಥಿತರಿದ್ದರು.

ಅಶೋಕ್‌ ಶೆಟ್ಟಿ, ಮೋಹನ್‌ ಸಾಲ್ಯಾನ್‌, ನ್ಯಾಯವಾದಿ ಆರ್‌. ಎಂ. ಭಂಡಾರಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯುವ ಪ್ರತಿಭೆ ದೀಕ್ಷಾ ಶೇಖರ್‌ ಪುತ್ರನ್‌ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. 

ಮಂಡಳಿಯ ಉಪಾಧ್ಯಕ್ಷ ರವಿ ಸನಿಲ್‌ ಸ್ವಾಗತಿಸಿದರು.  ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್‌ ಕೋಟ್ಯಾನ್‌ ವಂದಿಸಿದರು.

Advertisement

 ಚಿತ್ರ-ವರದಿ: ಗುರುರಾಜ ಪೋತನೀಸ್‌.

Advertisement

Udayavani is now on Telegram. Click here to join our channel and stay updated with the latest news.

Next